Thursday, February 6, 2014

ಶ್ರೀ ಮನ್ ಮಧ್ವಾಚಾರ್ಯರು

                          ಶ್ರೀ
                ಶ್ರೀ ಮನ್ ಮಧ್ವಾಚಾರ್ಯರು
               ಶ್ರೀ ಮನ್ಮಧ್ವಾಚಾರ್ಯರು ಜಗತ್ತು ಕಂಡ ಅಪ್ರತಿಮ ತತ್ವಜ್ನಾನಿಗಳು. ಅಪಾರ ಪ್ರತಿಭೆ, ಅನುಪಮಪಾಂಡಿತ್ಯ, ಸಲ್ಲಕ್ಷಣಭರಿತದೇಹ, ಅಪಾರಭಗವದ್ಭಕ್ತಿ ಮತ್ತು ಸುಜನರ ಸಂಕಷ್ಟಗಳನ್ನು ಪರಿಹರಿಸಿ ಸಂತುಷ್ಟರನ್ನಾಗಿಸುವ ಕಾರುಣ್ಯ, ಮೂದಲಾದ ಸದ್ಗುಣಗಳಿಂದಾಗಿ ಅವರು ವಿಶ್ವದ ಅದ್ವೀತಿಯ ತತ್ವಪ್ರಚಾರಕ ಗುರುಗಳಾಗಿ ಮಾನ್ಯರೆನಿಸಿದ್ದಾರೆ. ಅವತರಿಸಿದ್ದು ಉಡುಪಿಯಬಳಿಯ ಪಾಜಕದಲ್ಲಿ. ಹಂಸನಾಮಕ ಪರಮಾತ್ಮನ ಪರಂಪರೆಯ ಪೀಠವನ್ನುಆರೋಹಿಸಿದರು.  ಅಚೆತುಹಿಮಾಚಲಪರ್ಯಂತ ಸಂಚರಿಸಿ ಸಕಲಶಾಸ್ತ್ರಗಳ ಸಾರರೂಪವಾದ ಸರ್ವಮೂಲಗ್ರಂಥಗಳನ್ನು ಬರೆದರು. ಸಕಲಶಾಸ್ತ್ರಗಳ ಮರ್ಮವನ್ನು ಉಪದೇಸಿಸಿದರು ಮತ್ತು ಪರಗತಿಯ ರಾಜಮಾರ್ಗವನ್ನು ತೂರಿಸಿದರು. ಅನಾದಿವೈಷ್ಣವವೇದಾಂತ "ತತ್ವವಾದ"ವನ್ನು ಪ್ರವರ್ತಿಸಿದರು. ಹಾಗು ಅದರ ಸತ್ ಪರಂಪರೆಯ ತತ್ವಪ್ರಸಾರಕ್ಕಾಗಿ ಪೀಠಗಳನ್ನು ಸ್ತಾಪಿಸಿದರು.

           ಶ್ರೀಪದ್ಮನಾಭತೀರ್ಥರಂತಹ ಪರಮಹಂಸರನ್ನು, ತ್ರಿವಿಕ್ರಮಪಂಡಿತಾಚಾರ್ಯರಂತಹ ಗೃಹಸ್ಥ ಶಿಖಾಮಣಿಗಳನ್ನು, ಜಯಸಿಂಹರಾಜನಂತಹ ಅರಸರನ್ನು, ಮೂದಲಾದ ಅಸಂಖ್ಯ ಸಿಷ್ಯವರ್ಗವನ್ನು ಸಂಪಾದಿಸಿದರು. ಜಿಜ್ನಾಸುಗಳಾಗಿ, ಆರ್ತರಾಗಿ ಬಂದ ಯಾರನ್ನೂಕೂಡಾ ದೂರಮಾಡದೇ ಕರೆದು ಉದ್ಧಾರ ಮಾಡಿದ ವಿಶ್ವಗುರುಗಳು ಇ ಮದ್ವಾಚಾರ್ಯರು. ವೇದ, ವೇದಾಂತ, ಶಿಕ್ಷಾ, ವ್ಯಾಕರಣ,ವೇದಾಂಗ, ತರ್ಕ, ಮಿಮಾಂಶ, ಸಂಗೀತ, ಶಾಸ್ತ್ರ, ಎಲ್ಲದರಲ್ಲೂ ಇವರು ಪರಿ"ಪೂರ್ಣಪ್ರಮತಿ". ಎಲ್ಲ ಧರ್ಮೀಯರನ್ನೂ ತತ್ವಾರ್ಥಗರ್ಭಿತ ಅಪೂರ್ವ ಮಾತುಗಾರಿಕೆಯಿಂದಾ ಕ್ಷಣಕಾಲದಲ್ಲಿ ಪ್ರಭಾವಿತರನ್ನಾಗಿಸಬಲ್ಲ ಅನ್ಯಾದೃಶ ಯೋಗಶಕ್ತಿ ಅವರದ್ದು. ಅವರು ಅನುಪಮ ವಿದ್ವಾಂಸರು, ಬ್ರಹ್ಮಸಾಕ್ಷಾತ್ಕಾರ ಮಾಡಿಕೂಂಡದಾರ್ಶನಿಕರು, ವೇದದೃಷ್ಟಾರಋಷಿಗಳು, ತತ್ವೋಪದೇಶಕ ಗುರುಗಳು, ಅದ್ವೀತಿಯ ವಾಗ್ಮಿಗಳು, ವೈವಿಧ್ಯಮಯಗ್ರಂಥಕಾರರು, ಅಪೋರ್ವ ಸಂಶೋಧಕರು, ಅಪ್ರತಿಮ ವಾದಕೋವಿದರು, ಅಪೂರ್ವ ಅನುಭಾವಿಗಳು, ತತ್ವಜ್ನಾನದರಸಋಷಿಗಳು, ಸಕಲಭಾಷಾಕೋವಿದರು, ಅಪೂರ್ವಭಾಷಾಶಾಸ್ತ್ರಜ್ನರು, ಮಹಾ ತಪಸ್ವಿಗಳು, ಅನುಪಮ ಗಾನಕೋವಿದರು, ಪುರಾತತ್ವ ಶಾಸ್ತ್ರನ್ಜ್ಯರು, ಮೀಮಾಂಶಾದಿ ಸಕಲಶಾಸ್ತ್ರವಿಶಾರದರು, ಸಮರ್ಥಾಅಡಳಿತಗಾರರು, ಅಸಮಾನ್ಯ ಸಂಘಟನಾ ಚತುರರು, ಮತ್ತು ವಿಶಾಲಹೃದಯದ ಸಮಾಜ ಸುಧಾರಕರು.

       ಮಾಘ ಶುಕ್ಲ ನವಮಿಯಂದು ಶ್ರೀ ಮಧ್ವಾಚಾರ್ಯರು ಬದರಿಗೆ ಪ್ರಯಾಣ ಮಾಡಿದರು. ಮಧ್ವವಿಜಯ, ವಾಯುಸ್ತುತಿ, ಪವಮಾನಸೂಕ್ತ ಪಾರಾಯಣಾದಿಗಳು ವಿಹಿತವಾಗಿದೆ. ಶ್ರೀ ಮಧ್ವರು ಮಾನವದೃಷ್ಟಿಯಿಂದಾ ೭೯ವರ್ಷ ದೃಶ್ಯರಾಗಿದ್ದು ಪಿಂಗಲ ಸಂವತ್ಸರದ ಮಾಘ ಶುದ್ಧ ನವಮಿಯಂದು ದೂಡ್ಡಬದರಿಗೆ ಹೂದರು. ಅದೃಶ್ಯರಾಗಿ ಉಡುಪಿಯಲ್ಲಿಯೂ, ದೃಶ್ಯರಾಗಿ ಬದರಿಯಲ್ಲಿಯೂ ಇದ್ದು ಮಾನವರಲೆಕ್ಕದಂತೆ ಮೂವತ್ತಾರು(೩೬)ಸಾವಿರ ವರ್ಷಗಳು ಮುಗಿದಾಗ ಮೂಲರೂಪಕ್ಕೆ ಹೋಗಿ ಸೇರುವರು. ಇ ದಿನವು ಮಹಾನಂದವನ್ನು ಉಂಟುಮಾಡುವದರಿಂದಾ "ಮಹಾನಂದಾ ನವಮಿ" ಎಂದೂ ಹೇಳಲ್ಪಟ್ಟಿದೆ. ಇಂದು ಮಾಡುವ ಸ್ನಾನ, ದಾನ, ಜಪ, ಹೋಮ, ಉಪವಾಸ, ಮೂದಲಾದವುಗಳು ಅಕ್ಷಯಫಲವನ್ನು ನೀಡುವವು. ಅವರು ಮಾಡಿದ ಭಾಷ್ಯಗಳ ಅಭಿಪ್ರಾಯಗಳನ್ನು ಯಾರು ಪುನ: ಪುನ: ಆವೃತ್ತಿ ಮಾಡುವರೋ ಅವರು ಮೋಕ್ಷವನ್ನು ಹೂಂದುವರು.  
 

Friday, October 18, 2013

ಭಗವಂತನು ಪಕ್ಷಪಾತಿಯೇ?

ಭಗವಂತನು ಪಕ್ಷಪಾತಿಯೇ?
 
ಶ್ರೀಮದ್ಭಾಗವತದ ಸಪ್ತಮ ಸ್ಕಂಧದ ಆರಂಭದಲ್ಲಿ ಪರೀಕ್ಷಿತ್ ರಾಜನು, ನಮ್ಮೆಲ್ಲರ ಪ್ರತಿನಿಧಿಯಾಗಿ, ಶ್ರೀ ಶುಕಾಚಾರ್ಯರ ಮುಂದೆ ಒಂದು ಪ್ರಶ್ನೆ ಇಡುತ್ತಾನೆ. ದೇವ ಮತ್ತು ಅಸುರರ ನಡುವೆ ಯುಧ್ಧ ಸಂಭವಿಸಿದಾಗಲೆಲ್ಲಾ, ಮೊದಮೊದಲು ದೇವತೆಗಳಿಗೆ ಸೋಲುಂಟಾದರೂ, ಅಂತಿಮವಾಗಿ ಭಗವಂತ ದೇವತೆಗಳ ಕಡೆಗೆ ನಿಂತು ಅವರಿಗೆ ಜಯ ತಂದುಕೊಡುತ್ತಾನೆ. ದೈತ್ಯರನ್ನು ಸಂಹಾರ ಮಾಡುತ್ತಾನೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವುದನ್ನು ಕಾಣುತ್ತಿದ್ದೇವೆ. ಈ ಪ್ರಪಂಚದಲ್ಲಿ ಎಲ್ಲ ಜೀವರನ್ನೂ ದೇವ-ದಾನವ-ಮಾನವ-ಪ್ರಾಣಿ-ಪಕ್ಷಿ ಮುಂತಾದ ಸಕಲ ಜೀವರಾಶಿಯನ್ನು ಭಗವಂತನೇ ಸೃಸ್ಟಿಸಿದ್ದಾನೆ. (ಇಲ್ಲಿ ಸೃಸ್ಟಿಯೆಂದರೆ ಜೀವರುಗಳಿಗೆ ದೇಹ ಸೃಸ್ಟಿಮಾತ್ರ). ಹಾಗಾಗಿ ಎಲ್ಲರೂ ಭಗವಂತನ ಮಕ್ಕಳೇ. ಹೀಗಿರುವಾಗ ಪ್ರತೀಸಾರಿಯೂ ದೇವತೆಗಳನ್ನು ಗೆಲಿಸುವುದು, ಅಸುರರನ್ನು ಸೋಲಿಸುವುದರ ಔಚಿತ್ಯವೇನು?  ಏಕೆ ಒಮ್ಮೊಮ್ಮೆ ಅಸುರರನ್ನು ಗೆಲಿಸಿ ದೇವತೆಗಳನ್ನು ಸೋಲಿಸಬಾರದು? ಎರಡೂ ಬಣಗಳು ಅವನ ಮಕ್ಕಳೇ ತಾನೆ? ತನ್ನದೇ ಆದ ಮಕ್ಕಳಲ್ಲಿ ಈ ಪಕ್ಷಪಾತವೇಕೆ? ಭಗವಂತನಿಗೆ ತನ್ನವರು-ಬೇರೆಯವರು ಎಂಬ ಭಾವನೆಗಳಿವೆಯೇ?
 
ಈ ಮೇಲಿನ ಪ್ರಶ್ನೆಗೆ  ಶ್ರೀ ಶುಕಾಚಾರ್ಯರು ಉತ್ತರಿಸುತ್ತಾ ಭಗವಂತನಿಗೆ ತನ್ನವರು-ಬೇರೆಯವರು ಎಂಬ ಭಾವನೆಗಳಿರಲು ಸಾಧ್ಯವೇಇಲ್ಲ. ವಿಷಯ ಹೀಗಿರುವಾಗ ಅವನು ಪಕ್ಷಪಾತ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೇಗೆಂದರೆ, ಈ ರಾಗ-ದ್ವೇಷಗಳಿಗೆ ಮೂಲಕಾರಣ ಸತ್ವ-ರಜಸ್ಸು-ತಮೋಗುಣಗಳು. ಈ ತ್ರಿಗುಣಗಳಿಂದ ಯಾರು ಬದ್ಧರಾಗಿರುತ್ತಾರೋ ಅವರುಗಳು ಮಾತ್ರ ಈ ವೈಷಮ್ಯ-ನೈರ್ೃಘಣ್ಯ ಎಂಬ ದೋಷಗಳಿಂದ ಕೂಡಿದವರಾಗಿರುತ್ತಾರೆ. ಆದರೆ ಚಿತ್ಪ್ರಕೃತ್ಯಭಿಮಾನಿನಿಯಾದ ಲಕ್ಷ್ಮೀದೇವಿಯವರಿಗೇ ಈ ತ್ರಿಗುಣಗಳ ಬದ್ಧತೆಯಿರುವುದಿಲ್ಲ. ಅವರು ಈ ಗುಣಗಳ ಅಭಿಮಾನಿ ದೇವತೆ. ಹೀಗಿರುವಾಗ ಆ ಲಕ್ಷ್ಮೀದೇವಿಯವರ ಪತಿಯಾದ ಭಗವಂತನಿಗೆ ಈ ಗುಣಗಳ ಬದ್ಧತೆಯಿರುವುದಿಲ್ಲ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿರುವುದಿಲ್ಲ. ಆದುದರಿಂದ ಭಗವಂತನ ಮೇಲೆ ಈ ಗುಣಗಳ ಪ್ರಭಾವ ಉಂಟಾಗುವುದಿಲ್ಲ. ಈ ತ್ರಿಗುಣಗಳೂ ಅವನ ಹಿಡಿತದಲ್ಲಿರುತ್ತವೆ. ಹೀಗಾಗಿ ಅವನಿಗೆ ಇವರು ತನ್ನವರು, ಇವರು ಪರರು ಎಂಬ ಭಾವನೆಯೇ ಇರುವುದಿಲ್ಲ. ದೇವತೆಗಳ ಗೆಲುವಿನಿಂದ ಅಥವಾ ಅಸುರರ ಸೋಲಿನಿಂದ ಅವನಿಗಾಗಬೇಕಾದ ಪ್ರಯೋಜನವೂ ಇಲ್ಲ-ನಷ್ಠವೂ ಇಲ್ಲ. ದೇವತೆಗಳು ತನ್ನನ್ನು ಪ್ರೀತಿಸುತ್ತಾರೆಂದಾಗಲೀ, ಅಸುರರು ತನ್ನನ್ನು ದ್ವೇಷಿಸುತ್ತಾರೆಂದಾಗಲೀ ತಿಳಿದು ಅವನು ಯಾವುದೇ ಪಕ್ಷಪಾತ ಮಾಡುವುದಿಲ್ಲ. ಯಾರ ಪ್ರೀತಿಯಿಂದಾಗಲೀ-ದ್ವೇಷದಿಂದಾಗಲೀ ಅವನಿಗೆ ಆಗಬೇಕಾದ್ದು ಏನೂ ಇಲ್ಲ. ಅವನ ಮೂಲ ಉದ್ದೇಶ ಜಗತ್ತಿನಲ್ಲಿ ಒಳ್ಳೇದು ಎಂಬುದು ಗೆಲ್ಲಬೇಕು, ಕೆಟ್ಟದ್ದು ನಾಶವಾಗಬೇಕು. ದೇವತೆಗಳು ಒಳ್ಳೆಯವರು-ಸಾತ್ವಿಕರು, ಆದುದರಿಂದ ಅವರ ಪಕ್ಷಕ್ಕೆ ಜಯ ತಂದುಕೊಡುತ್ತಾನೆ ಅಸ್ಠೆ ನಮ್ಮ ಕಣ್ಮುಂದಿರುವ ಈ ಲೋಕದಲ್ಲಿಯಾದರೂ ಸಾಮಾನ್ಯವಾಗಿ  ನಾವು ಮಾಡುವುದು ಅದೇ ತಾನೆ. 
 
ಹೌದೂ, ಈ ಲೋಕದಲ್ಲಿ ಜನರ ಬುದ್ಧಿ ನಮ್ಮ ಕೈಯಲ್ಲಿರುವುದಿಲ್ಲ. ಹಾಗಾಗಿ ನಮಗೆ ಒಳ್ಳೆಯದನ್ನು ಪ್ರೋತ್ಸಾಹಿಸುವ ಕೆಟ್ಟದ್ದನ್ನು ಟೀಕಿಸುವ ಕೆಲಸವನ್ನು ಮಾಡುತ್ತೇವೆ. ಆದರೆ ಭಗವಂತ ಸರ್ವಸಮರ್ಥನಿರುವಾಗ ಅವನು ತನ್ನ ಮಕ್ಕಳಲ್ಲೇ ಕೆಲವರಿಗೆ ಒಳ್ಳೆ ಬುದ್ಧಿಯನ್ನು-ಕೆಲವರಿಗೆ ಕೆಟ್ಟ ಬುದ್ಧಿಯನ್ನು ಏಕೆ ಕೊಡಬೇಕು? ಎಲ್ಲರಿಗೂ ಒಳ್ಳೇ ಬುದ್ಧಿಯನ್ನೇ ಕೊಡಬಾರದೇಕೆ? ಹೀಗೆ ಮಾಡುವುದರಿಂದ ಯಾವ ಸಮಸ್ಯೆಯೇ ಇರುವುದಿಲ್ಲವಲ್ಲ. ಕೆಲವರಿಗೆ ತನ್ನನ್ನು ಪ್ರೀತಿಸುವ ಬುದ್ಧಿ-ಕೆಲವರಿಗೆ ತನ್ನನ್ನು ದ್ವೇಷಿಸುವ ಬುದ್ಧಿಯನ್ನು ಏಕೆ ಕೊಡಬೇಕು?  ಎಲ್ಲರಿಗೂ ತನ್ನನ್ನು ಪ್ರೀತಿಸುವ ಬುದ್ಧಿಯನ್ನು ಕೊಟ್ಟುಬಿಟ್ಟಿದ್ದರೆ ಎಲ್ಲರೂ ತನ್ನ ಭಕ್ತರೇ ಆಗಿರುತ್ತಿದ್ದರು. ಆಗ ತಾನು ಯಾರಪರವಾಗಿಯೂ ನಿಲ್ಲುವ ಪ್ರಸಂಗವೇ ಉಂಟಾಗುತ್ತಿರಲಿಲ್ಲವಲ್ಲವೇ? ಭಗವಂತ ಯಾಕೆ ಹಾಗೆ ಮಾಡಬಾರದು ಎಂಬ ಪ್ರಶ್ನೆ ಬಂದಾಗ ಶ್ರೀ ಶುಕಾಚಾರ್ಯರು  ಮುಂದೆ ಉತ್ತರಿಸುತ್ತಾರೆ
ಭಗವಂತ ಸರ್ವತಂತ್ರ ಸ್ವತಂತ್ರ. ಸ್ವತಂತ್ರ ಎಂದರೆ, ಅವನು ಯಾರಿಗೂ ಅಧೀನನಲ್ಲ ಆದರೇ ಅವನು ತನಗೆ ತಾನು ಅಧೀನ. ಸ್ವ-ತಂತ್ರ ಎಂಬುದರ ಅರ್ಥವೇ ಹಾಗೆ. ತಾನು ರೂಪಿಸಿದ(ರಚಿಸಿದ) ನಿಯಮಗಳಿಗೆ ಅವನು ಬದ್ಧ. ಅದು ಅವನ ಸಂವಿಧಾನ. ಅದು ಒಂದು ಅವನ ಗುಣ. ದೋಷವಲ್ಲ. ನಮ್ಮ ದೇಶ ಭಾರತವೂ ಸ್ವತಂತ್ರ ದೇಶ. ಇಲ್ಲಿ ನಾವೇ ರಚಿಸಿಕೊಂಡ ಸಂವಿಧಾನವಿದ್ದರೂ, ಅದಕ್ಕೆ ಬದ್ಧರಾಗಿರುವವರಕ್ಕಿಂತ ಉಲ್ಲಂಘಿಸುವವರೇ ಹೆಚ್ಚು. ಆದರೆ ಭಗವಂತನ ವಿಷಯ ಹಾಗಿಲ್ಲ. ಈ ಕಾರಣದಿಂದಾಗಿಯೇ ಇದುವರೆವಿಗೂ ಸೃಷ್ಟವಾಗಿರುವ ಎಲ್ಲ ಪ್ರಪಂಚಗಳು ಒಂದೇ ರೀತಿಯಾಗಿವೆ. ಎಂದೂ ಸೃಸ್ಟಿಯ ನಿಯಮ ಬದಲಾಗುವುದಿಲ್ಲ. ಒಮ್ಮೆ ಸೂರ್ಯ ಹಗಲು ಹುಟ್ಟುವುದು-ಒಮ್ಮೆ ರಾತ್ರಿ. ಒಮ್ಮೆ ಸುಡುವ ಸೂರ್ಯ-ಒಮ್ಮೆ ತಣ್ಣಗೆ ಹೀಗೆ ಬದಲಾಗುವುದಿಲ್ಲ. ಭಗವಂತನು ಸರ್ವಸಮರ್ಥನಾದರೂ ಅವನು ಯಾವುದನ್ನೂ ಬದಲಿಸುವುದಿಲ್ಲ. ಅದು ಅವನ ಸಂಕಲ್ಪ. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ. 
 
 
ಜೀವಿಗಳು ಭಗವಂತನ ಪ್ರತಿಬಿಂಬರೇ ಆದರೂ ಪ್ರತಿಯೊಂದು ಜೀವಿಯ ಸ್ವಭಾವ ಬೇರೆಯೇ ಆಗಿರುತ್ತದೆ. ಭಿನ್ನಾಶ್ಚ ಭಿನ್ನಕರ್ಮಶ್ಚ. ಮೂರು ವಿಧ ಜೀವರುಗಳಿದ್ದಾರೆ. ಸಾತ್ವಿಕ-ರಾಜಸ ಹಾಗು ತಾಮಸ ಎಂದು ಮೂರು ವಿಧ. ಇವುಗಳಲ್ಲಿಯೂ ಮತ್ತೇ ವಿಭಾಗ ಮಾಡಿದಾಗ, ಸಾತ್ವಿಕ-ಸಾತ್ವಿಕ, ಸಾತ್ವಿಕ-ರಾಜಸ, ಸಾತ್ವಿಕ-ತಾಮಸ; ರಾಜಸ-ಸಾತ್ವಿಕ, ರಾಜಸ-ರಾಜಸ, ರಾಜಸ-ತಾಮಸ, ತಾಮಸ-ಸಾತ್ವಿಕ, ತಾಮಸ-ರಾಜಸ, ತಾಮಸ-ತಾಮಸ ಎಂದು ಒಂಭತ್ತು ರೀತಿ ವಿಭಾಗವಾಗುತ್ತದೆ. ಮುಂದುವರಿದು ಇವುಗಳಲ್ಲಿ ಇನ್ನೂ ಒಟ್ಟು 81 ರೀತಿಯಲ್ಲಿ ವಿಭಾಗವಾಗುತ್ತದೆ.  ಸಾತ್ವಿಕರೆಂದರೆ ಒಳ್ಳೆಯವರು; ರಾಜಸರೆಂದರೆ ಒಳ್ಳೆಯ ಮತ್ತು ಕೆಟ್ಟ ಗುಣಗಳ ಮಿಶ್ರರು ಮತ್ತು ತಾಮಸರೆಂದರೆ, ಕೆಟ್ಟವರು ಅಂದರೆ ದೈತ್ಯರು. ಈ ಮೇಲೆ ತಿಳಿಸಿದಂತೆ ಭಗವಂತ ಈ ಜೀವಿಗಳ ಸ್ವಭಾವವನ್ನು ಬದಲಿಸುವುದಿಲ್ಲ. ಜೀವಿಗಳಿಗೆ ಅವರದೇ ಆದ ಸ್ವಭಾವವಿದೆ ಎಂಬ ಸತ್ಯವನ್ನು ಮೊತ್ತಮೊದಲು ಆಧ್ಯತ್ಮ ಲೋಕಕ್ಕೆ ಪರಿಚಯಿಸಿದವರು ಶ್ರೀಮದಾನಂದತೀರ್ಥರು. 
 
 
ಭಗವಂತನ ಕೆಲಸವೇನಿದ್ದರೂ ತೋಟಗಾರನ ಕೆಲಸ ಮಾತ್ರ. ಹೇಗೆ ಒಬ್ಬ ತೋಟಗಾರನು ತರತರಹದ ಗಿಡಗಳನ್ನು ನೆಟ್ಟು, ಅವಕ್ಕೆ ನೀರು-ಗೊಬ್ಬರ ಹಾಕಿ ಹೇಗೆ ಬೆಳೆಸುತ್ತಾನೋ ಹಾಗೆ ಭಗವಂತ ಜೀವಿಗಳನ್ನು ಅಸೃಜ್ಯಾವಸ್ಥೆಯಿಂದ ಈ ಸೃಸ್ಟಿಗೆ ತಂದು ಆಯಾ ಜೀವಿಗಳ ಸ್ವಭಾವದ ವಿಕಾಸಕ್ಕೆ ಬೇಕಾದ ಅನುಕೂಲಗಳನ್ನು ಕಲ್ಪಿಸಿ ಅವುಗಳು ತಮ್ಮ-ತಮ್ಮ ಗತಿ ಹೊಂದಲು ಸಹಕಾರಿಯಾಗುತ್ತಾನೆ. ಇದು ಜೀವಿಗಳ ಮೇಲಿನ ಅವನ ಕಾರುಣ್ಯ. ಇಲ್ಲದೇ ಹೋಗಿದ್ದಲ್ಲಿ ಜೀವಿಗಳಿಗೆ ತಮ್ಮ ಅಸ್ತಿತ್ವವೇ ತಿಳಿಯದಾಗಿಬಿಡುತ್ತಿತ್ತು. ಭಗವಂತನ ಕಾರುಣ್ಯದಿಂದ ಜೀವಿಗಳು ಸೃಸ್ಟಿಗೆ ಬಂದು ತಮ್ಮ-ತಮ್ಮ ಸಾಧನೆ ಮಾಡಿಕೊಂಡು ತಮ್ಮ-ತಮ್ಮ ಗತಿ ಹೊಂದಲು ಸಾಧ್ಯವಾಗುತ್ತದೆ. ತೋಟದಲ್ಲಿ ಬೇಳೆಸಿದ ಗಿಡಗಳಲ್ಲಿ ಮಾವಿನಮರ ಬಿಡುವ ಹಣ್ಣು ಸಿಹಿ; ನಿಂಬೆಹಣ್ಣು ಹುಳಿ; ಹಾಗಲಕಾಯಿ ಕಹಿ ಹೇಗೋ ಹಾಗೆ ಜೀವಿಗಳ ವಿಭಿನ್ನ ಸ್ವಭಾವಗಳು. ಜೀವಿಗಳು ಅಸ್ವತಂತ್ರರಾದುದರಿಂದ, ಅವುಗಳು ತಾವೇ ಸ್ವತಃ ತಮ್ಮ ಸಾಧನೆ ಮಾಡಿಕೊಳ್ಳಲು ಅಸಮರ್ಥರಾಗಿರುತ್ತಾರಾದ್ದರಿಂದ ಭಗವಂತ ಇವರಲ್ಲಿ ನಿಂತು ತಾನು ಅವರಿಂದ ಕರ್ಮಗಳನ್ನು ಮಾಡಿಸಿ ಅವರವರ ಕರ್ಮಗಳಿಗೆ ತಕ್ಕ ಫಲವನ್ನು ನೀಡುತ್ತಾನೆ. ಒಂದು ಲೌಕಿಕ ಉದಾಹರಣೆಯನ್ನು ನೋಡುವುದಾದರೆ,  ನಮ್ಮ ಮನೆಗಳಲ್ಲಿ ಅನೇಕ ವಿದ್ಯುತ್ ಉಪಕರಣಗಳಿರುತ್ತವೆ. ಫ್ರೀಜ್, ಗೀಜರ್, ಏರ್ ಕೂಲರ್, ರೂಮ್ ವಾರ್ಮರ್ ಹೀಗೆ ಅನೇಕ ರೀತಿಯಾಗಿರುತ್ತವೆ. ಫ್ರೀಜನಲ್ಲಿ ನೀರು ತಣ್ಣಗಾದರೆ, ಗೀಜರ್ನಲ್ಲಿ ಬಿಸಿಯಾಗುತ್ತದೆ. ಏರ್ ಕೂಲರ್ನಲ್ಲಿ ಗಾಳಿ ತಣ್ಣಗೆ ಬೀಸುತ್ತದೆ. ರೂಮ್ ವಾರ್ಮರ್ ಕೋಣೆಯನ್ನು ಬೆಚ್ಚಗೆ ಇಡುತ್ತದೆ. ಈ ರೀತಿಯಾಗಿ ಅವು ವಿಭಿನ್ನ ಸ್ವಭಾವದ ಉಪಕರಣಗಳು. ಅವುಗಳು ತಾವೇತಾವಾಗಿ ಸ್ವತಃ ಕೆಲಸ ನಿರ್ವಹಿಸಲು ಅಸಮರ್ಥವಾಗಿರುತ್ತವೆ. ಅವುಗಳಲ್ಲಿ ವಿದುತ್ತನ್ನು ಹಾಯಿಸಿದಾಗ ಮಾತ್ರ ಅವು ಕೆಲಸ ಮಾಡುತ್ತವೆ. ಭಗವಂತ ವಿದ್ಯುತ್ ಇದ್ದಂತೆ. ಹೇಗೆ ವಿದ್ಯುತ್, ಉಪಕರಣಗಳಲ್ಲಿ ಹರಿದು ಆ ಆ ಉಪಕರಣಗಳ ಗುಣಧರ್ಮಗಳಿಗನುಸಾರವಾಗಿ ಕೆಲಸ ಮಾಡಿಸುತ್ತದೋ, ಹಾಗೆ ಭಗವಂತ ಜೀವರುಗಳ ಅಂತಯರ್ಾಮಿಗಿದ್ದುಕೊಂಡು ಜೀವಿಗಳ ಸ್ವಭಾವಗಳಿಗನುಸಾರವಾಗಿ ಕರ್ಮ ಮಾಡಿಸುತ್ತಾನೆ. ಸ್ವಭಾವಗಳನ್ನು ಬದಲಿಸುವುದಿಲ್ಲ. 
 
ಭಗವಂತ ಯಾವಾಗಲೂ ಒಳ್ಳೆಯದನ್ನೇ ಬೆಂಬಲಿಸುತ್ತಾನೆ.  ದೇವತೆಗಳು ಸಹಜವಾಗಿಯೇ ಒಳ್ಳೆಯಸ್ವಭಾವದವರು-ದೈತ್ಯರು ಕೆಟ್ಟ ಸ್ವಭಾವದವರು. ಹೀಗಾಗಿ ಸಹಜವಾಗಿಯೇ ಭಗವಂತ ದೇವತೆಗಳ ಪಕ್ಷದಲ್ಲಿ ನಿಲ್ಲುತ್ತಾನೆಯೇ ಹೊರತು ಅವನಿಗೆ ತನ್ನವರು-ಬೇರೆಯವರು ಎಂಬ ಮಮತೆಯಾಗಲಿ-ಪಕ್ಷಪಾತವಾಗಲೀ-ದ್ವೇಷವಾಗಲೀ ಎಂದೂ ಇರುವುದಿಲ್ಲ. ಈ ಹಿಂದೆ ನಿಮ್ಮ ತಾತ ಧರ್ಮರಾಜ ನಾರದರಿಗೆ ಇಂತಹದ್ದೇ ಒಂದು ಪ್ರಶ್ನೆಯನ್ನು ಕೇಳಿದ್ದ ಎಂದು ಶ್ರೀ ಶುಕಾಚಾರ್ಯರು ಪರೀಕ್ಷಿತರಾಜನಿಗೆ ಹೇಳುತ್ತಾರೆ.
 
ಧರ್ಮರಾಜನು ನಾರದರಿಗೆ ಕೇಳಿದ ಪ್ರಶ್ನೆ ಏನು? ಅದಕ್ಕೆ ನಾರದರ ಉತ್ತರವೇನು? ಎಂಬುದನ್ನು ಮುಂದಿನ ಭಾಗದಲ್ಲಿ ನೋಡೋಣ. 
 
 
 ಶ್ರೀಕೃಷ್ಣಾರ್ಪಣಮಸ್ತು
 
 
ಕೆ. ಸತ್ಯನಾರಾಯಣರಾವ್, ಹೊಸಪೇಟೆ. 
 

Monday, September 9, 2013

ಋಷಿ ಪಂಚಮಿ ಪೂಜಾ ವಿಧಾನ

ಋಷಿ ಪಂಚಮಿ ಪೂಜಾ ವಿಧಾನ

ಭಾದ್ರಪದ ಶುಕ್ಲ ಪಂಚಮಿ ಋಷಿಪಂಚಮಿ ವೃತವು. ಅಂದು ವೃತಮಾಡುವ ಸ್ತ್ರೀಯು ಪ್ರಾತಕ್ಕಾಲದಲ್ಲಿ ಸ್ನಾನ ನಿತ್ಯ ಕ್ರಿಯಾಗಳನ್ನೆಲ್ಲಾ ನೆರವೇರಿಸಿ ನದಿ ಮೊದಲಾದ ಜಲಕ್ಕೆ ೧೦೮ ಉತ್ತರಾಣಿ ಕಡ್ಡಿಗಳು, ಭಸ್ಮ, ಗೋಮಯ, ಮೃತ್ತಿಕೆ, ಎಳ್ಳು, ನೆಲ್ಲಿಯಕಲ್ಕ ಗಳನ್ನು ತೆಗೆದುಕೂಂಡು ಹೂಗಬೆಕು. ಅಲ್ಲಿ ಆದ್ಯಪೂರ್ವೋಚ್ಚಿತ ಏವಂ ಗುಣವಿಶೇಷಣ ವಿಶಿಷ್ಟಾಯಂ ಮಮ ಇಹಜನ್ಮನಿ ಜನ್ಮಾಂತರ ಜ್ಞಾತಾಜ್ಞಾತ ಸ್ಪರ್ಶಜನಿತ ದೋಷಕ್ಷಯದ್ವಾರಾ ಅರುಂಧತಿ ಸಹಿತ ಕಶ್ಯಪಾದಿಸಪ್ತರ್ಷಿ ಪ್ರಿತ್ಯರ್ಥಂ ಋಷಿಪಂಚಮಿ ವೃತಾಂಗತ್ವೇನ ದಂತಧಾವನ ಭಸ್ಮ, ಮೃತಿಕಾ, ಗೋಮಯ, ತಿಲಾಮುಲಕ, ಕಲ್ಕ ಲೇಪನ ಪೂರ್ವಕ ಸಂಗಮಾದಿ ತೀರ್ಥಸ್ನಾನಮಹಂ ಕರಿಷ್ಯೆ. ಎಂದು ಸಂಕಲ್ಪ ಪೂರ್ವಕ ಸ್ನಾನ ಮಾಡಬೇಕು.

ವನಸ್ಪತಿ ಪ್ರಾರ್ಥನೆ -
ಆಯುರ್ಬಲಂ ಯಶೋವರ್ಚ: ಪ್ರಜಾ: ಪಶುವಸೂನಿ ಚ:| ಬ್ರಹ್ಮಪ್ರಜ್ಞಾ ಚ ಮೇಧಾಂ ಚತ್ವನ್ನೂ ದೇಹವನಸ್ಪತೆ|| (ವನಸ್ಪತಿಯನ್ನು ಪ್ರಾರ್ಥಿಸಬೇಕು)

ದಂತಧಾವನ ಮಂತ್ರ -
ಮುಖ ದುರ್ಗಂಧಿನಾಶಾಯ ದಂತಾನಾಂ ಚ ವಿಶುಧಯೇ| ಷ್ಠೀವನಾಯ ಚ ಗಾತ್ರಾಣಾಂ ಕರ್ವೇಹಂ ದಂತದಾವನಂ|| (೧೦೮ ಉತ್ತರಾಣಿ ಕಡ್ಡಿಗಳಿಂದಾ ಹಲ್ಲುಜ್ಜಬೇಕು.)

ಗೋಮಯಮಾದಾಯ -
ಅಗ್ರೇಮಗ್ರಂ ಚರಂತೀನಾಮೋಂಷಧೀನಾಂ ವನೇವನೇ| ತಾಸಾ ಮೃಷಭಪತ್ನಿನಾಂ ಪವಿತ್ರಂ ಕಾಯಶೋಧನಂ| ತನ್ಮೇರೋಗಾಂಶ್ಚ ಶೋಕಾಂಶ್ಚನುದ ಗೋಮಯ ಸರ್ವದಾ|| (ಮೈಗೆ ಹಚ್ಚಿಕೂಂಡು ಸ್ನಾನ ಮಾಡಬೇಕು)

ಮೃತ್ತಿಕಾಮಾದಾಯ -
ಅಶ್ವಕ್ರಾಂತೆ ರಥಕ್ರಾಂತೆ ವಿಷ್ಣುಕ್ರಾಂತೆ ವಸುಂಧರೇ | ಶಿರಸಾಧಾರಾಷ್ಯಾಮಿ ರಕ್ಷಸ್ವಮಾಂ ಪದೆ ಪದೆ|| (ಮೃತಿಕಾ,ಎಳ್ಳು,ನೆಲ್ಲಿ ಹಚ್ಚಿಕೂಂಡು ಸ್ನಾನ ಮಾಡಬೇಕು)

ಗಂಗಾ ಗಂಗೇತಿ ಯೋ ಭ್ರೂಯಾತ ಯೋಜನಾನಾಂ ಶತೈರಪಿ | ಮುಚ್ಚ್ಯತೆ ಸರ್ವ ಪಾಪೃಸ್ಚ ವಿಷ್ಣುಲೋಕಂ ಸ ಗಚ್ಚತಿ||

ಹೀಗೆ ಗಂಗೆಯನ್ನು ಪ್ರಾರ್ಥಿಸಿ ಗಂಧಾದಿಗಳಿಂದಾ ಪೂಜಿಸಿ ಅರ್ಘ್ಯವನ್ನು ಕೂಡಬೇಕು.

ಕಶ್ಯಪಾಯ ನಮ: ಇದಮರ್ಘ್ಯಂ ಸಮರ್ಪಯಾಮಿ.
ಅತ್ರೆಯೇ ನಮ: " "
ವಿಶ್ವಾಮಿತ್ರಾಯನಮ: " "
ಗೌತಮಾಯನಮ: " "
ಜಮದಗ್ನಯೇನಮ; " "
ವಶಿಷ್ಟಾಯನಮ: " "
ಅರುಂಧತ್ತೈಯೇನಮ" " "

ಎಲ್ಲ ವರ್ಣದ ಸ್ತ್ರೀಯರು ಪವಿತ್ರ್ ಜಲದಲ್ಲಿ ಮೇಲಿನ ವಿಧಿಯಿಂದಾ ಸ್ನಾನ ಮಾಡಿ ಮನೆಗೆ ಬರಬೇಕು. ಗೋಮಯದಿಂದಾ ಸಾರಿಸಿ ರಂಗವಲ್ಲಿಯನ್ನು ಹಾಕಿ ಮಂಡಲ ಮಾಡಿ ಮಂಟಪವನ್ನು ತಯ್ಯಾರಿಸಬೇಕು. ತಾಮ್ರದ/ಮಣ್ಣಿನ ಕೂಡದಲ್ಲಿ ನೀರು ತುಂಬಿ ಕಲಶ ಸ್ತಾಪನೆ ಮಾಡಬೆಕು ಅದರಲ್ಲಿ ಸಪ್ತಋಷಿಗಳನ್ನು ಆವಾಹಿಸಿ, ವಸ್ತ್ರ,ಹಾರ, ಗಂಧ, ಪುಷ್ಪ, ಧೂಪ ದೀಪ,ನೇವೈದ್ಯಗಳೂಂದಿಗೆ ಷೂಡಷೂಪಚಾರಗಳಿಂದಾ ಪೂಜಿಸಬೇಕು.
ನಂತರ ಆಚಾರ್ಯರಿಗೆ ತಾಂಬೂಲ ವಸ್ತ್ರ ದಕ್ಷೀಣಾದಿಗಳೂಂದಿಗೆ ವಾಯನದಾನವನ್ನು ಕೂಡಬೇಕು.ಹಾಗು ವೃತಕತೆಯನ್ನು ಕೇಳಬೇಕು. ಅಂದು ಸ್ತ್ರೀಯರು ಉಪವಾಸವಿರಬೇಕು.
 
 

Tuesday, August 27, 2013

ಶ್ರಾವಣ ಮಾಸ ಮಹಾತ್ಮೆ - ೨

 
೭) ದೂರ್ವಾಗಣಪತಿವೃತ - ಶ್ರಾವಣ ಮಾಸದ ಚತುರ್ಥಿಯಂದು "ದೂರ್ವಾಗಣಪತಿ" ವೃತವನ್ನು ಆಚರಿಸಬೇಕು. ಮಣ್ಣಿನ ಗಣಪತಿಯನ್ನು ಮಾಡಿ ಪೀಠದ ಮೇಲೆ ದೂರ್ವೆಗಳನ್ನು ಹರಡಿ ಅದರ ಮೇಲೆ ಗಣಪತಿಯನ್ನು ಕೂಡಿಸಬೇಕು. "ಗಣಾನಾಂತ್ವಾ ಎಂಬ ಮಂತ್ರದಿಂದಾ ಆವ್ಹಾನಿಸಿ ಷೂಡಷೂಪಚಾರದಿಂದಾ ಪೂಜಿಸಬೇಕು. ಕೆಂಪು ಬಣ್ಣದ ಹೂವು ಗಳಿಂದಾ, ದೂರ್ವಾದಿಂದಾ ನಾಮಪೂಜೆಯೂಂದಿಗೆ ಏರಿಸಬೇಕು. ಗಣೇಶಾಥರ್ವ ಪಾರಾಯಣವನ್ನು ಮಾಡಿ, ಸಾಧ್ಯವಾದಲ್ಲಿ ದೂರ್ವೆ, ಕಡಬುಗಳಿಂದಾ ಹೋಮಿಸಬೇಕು. ಈ ವೃತವು ಸರ್ವವಿಘ್ನಗಳನ್ನು ಪರಿಹರಿಸುತ್ತದೆ.

೮) ಅನಂತ ವೃತ - ಶ್ರಾವಣ ಚತುರ್ಥಿಯಂದು ಅನಂತನ ಪೂಜೆಯನ್ನು ಮಾಡಬೇಕು. ಹದಿಮೂರು ಗ್ರಂಥಿಗಳುಳ್ಳ ಅನಂತನ ದಾರವನ್ನು ಮಾಡಿ ಪೂಜಿಸಿ ಬಲಹಸ್ತದಲ್ಲಿ ಕಟ್ಟಿಕೂಳ್ಳಬೇಕು.

ಇಂದು ವರಾಹ ಜಯಂತಿಕೂಡಾ ಆಚರಿಸಬೇಕು.

೯) ನಾಗ ಚತುರ್ಥಿ ವೃತ - ನಾಗ ಚತುರ್ಥಿಯಂದು ಹೆಣ್ಣುಮಕ್ಕಳು ಅಭ್ಯಂಜನಸ್ನಾನ ಮಾಡಬೇಕು ನಾಗದೆವತೆಯ ಅಂತರ್ಯಾಮಿಯಾದ ಸಂಕರ್ಷಣನನ್ನು ಮನೆಯ ಮುಂದೆ ಬಾಗಿಲಿಗೆ ಕೆಮ್ಮಣ್ಣಿನಿದಾಗಲಿ, ಗೋಮಯದಿಂದಾಗಲಿ ನಾಗನನ್ನು ಬರೆದು ಆವಾಹಿಸಿ ಅಭಿಷೇಕ ಮಾಡಿ ಗಂಧ,ದೂರ್ವಾ, ಹಳದಿಗೆಜ್ಜೆವಸ್ತ್ರಾದಿಗಳಿಂದಾ ಪೂಜಿಸಿ ಬೆಲ್ಲದನೀರು (ಹಾಲು)ಎರೆಯಬೇಕು, ಹಸಿಕಡಲೇಕಾಳು, ಅರಳು,ಹಸಿಚಿಗಳೆ, ತಂಬಿಟ್ಟು ಮುಂತಾದವುಗಳಿಂದಾ ನಿವೇದಿಸಬೇಕು. ನಂತರ ಫಲಹಾರ ಮಾಡಬಹುದು ಅಂದು ನಾರಿಯರು ಉಪವಾಸ ಮಾಡಬೇಕು.

೧೦) ನಾಗ ಪಂಚಮಿ - ಇಂದು ಐದು ಹೆಡೆಗಳುಳ್ಳ ನಾಗನನ್ನು ಮೃತಿಕೆಯಿಂದಾ ಮಾಡಿ ಅದರಲ್ಲಿ ಶೇಷಾಂತರ್ಯಾಮಿಯಾದ ಸಂಕರ್ಣನನ್ನು ಆವಾಹಿಸಿ ಷೂಡಷೂಪಚಾರಗಳಿಂದಾ ಪೂಜಿಸಿ (ಇಂದು ಕೆಂಪು ಗೆಜ್ಜೆವಸ್ತ್ರ) ಹಿಂದೆಹೇಳಿದ ಪೂಜಾದ್ರವ್ಯಗಳಿಂದಾ ಅಲಂಕಾರ ನಿವೆದನೆಗಳನ್ನು ಮಾಡಬೇಕು. ಇಂದು ಹಸುವಿನ ಹಾಲನ್ನು ಎರೆಯಬೇಕು. ಇಂದು ಮಾತ್ರ ಸ್ತ್ರೀಯರು ತೆಂಗಿನಕಾಯಿಗಳನ್ನು ಒಡೆಯಬಹುದು.

೧೧) ಗರುಡ ಪಂಚಮಿ - ಗರುಡನು ದೇವಲೋಕದಿಂದಾ ಅಮೃತವನ್ನು ತಂದು ನಾಗಗಳಿಗೆ ಕೊಟ್ಟು ನಾಗಗಳ ಬಾಯಿಯಿಂದಲೇ "ನೀನು,ಮತ್ತು ನಿನ್ನ ತಾಯಿ ವಿನತೆಯು ದಾಸ್ಯದಿಂದಾ ಮುಕ್ತರಾಗಿರುವಿರಿ" ಎಂದು ಹೇಳಿದ ದಿವಸವಿದು.

೧೨) ಸಿರಿಯಾಳ ಷಷ್ಟೀ - ಇದಿವಸ ಮೂಸರನ್ನಕ್ಕೆ ವಿಶೇಷ ಪ್ರಾಧಾನ್ಯ. ಮನೆಯಲ್ಲಿರುವ ಕನ್ಯರಿಂದಾ ಮೂಸರನ್ನ, ಮೂಸರ ಅವಲ್ಲಕ್ಕಿ, ಉಪ್ಪಿನಕಯಿಗಳನ್ನು ಸಂಕ್ರಾಂತಿಯಲ್ಲಿ ಯಳ್ಳು ಬೆಲ್ಲಾ ಬೀರಿದಂತೆ ಮನೆ ಮನೆಗಳಿಗೆ ಬಿರಬೇಕು. ಅಂದು ಭಗವಂತನಿಗೆ ಕೂಡಾ ಶಾವಿಗೆ ಪಾಯಸ, ಮೂಸರನ್ನ, ಮೂಸರವಲಕ್ಕಿ, ಉಪ್ಪಿನಕಾಯಿಗಳನ್ನು ನಿವೇದಿಸಬೇಕು. ಹಾಗು ಇವೆಲ್ಲವುಗಳನ್ನು ಒಂದು ಬಾಳೆಯಲಿಯಲ್ಲಿ ಹಾಕಿ ಬುತ್ತಿ ಕಟ್ಟಿದಂತೆ ಕಟ್ಟಿ ದಾನ ಕೂಡಬೇಕು. ಹಾಗು ಸಂಜೆ ಸ್ಕಂದ ಜನ್ಮ ವೃತ್ತಾಂತವನ್ನು ಕೇಳಬೇಕು. ಇದರಿಂದಾ ಅವರ ಭಾವಿ ಜೀವನ ಹಸನಾಗಿರುತ್ತದೆ.

೧೩,೧೪) ಅವ್ಯಂಗವೃತ - ಶ್ರಾವಣ ಶುಧ ಸಪ್ತಮಿಯನ್ನು ಶೀತಲಾ ಸಪ್ತಮಿಯಂದು ಕರೆಯುವರು. ಸಪ್ತಮಿ ಹಸ್ತಾ ನಕ್ಷತ್ರದಿಂದಾ ಕೂಡಿದ್ದರೆ "ಪಾಪನಾಶಿನಿ" ಯಂದು ಕರೆಯಲ್ಪಡುವದು. ಇಂದು ಗೋಡೆಯ ಮೇಲೆ ಭಾವಿಯ ಚಿತ್ರ, ಏಳು ಜಲದೇವತೆಗಳು, ಇಬ್ಬರು ಬಾಲಕರು, ಮೂವರು ಸ್ತ್ರೀಯರು, ಅಶ್ವ, ವೃಷಭ, ನರವಾಹನ, ಪಲ್ಲಕ್ಕಿ ಇವುಗಳ ಚಿತ್ರ ಬರೆಯಬೇಕು. ಅದರ ಕೆಳಗಡೆ ಕಲಶ ಸ್ತಾಪನೆಮಾಡಬೇಕು. ಅದರಲ್ಲಿ ಸೂರ್ಯಾಂತರ್ಗತ ನಾರಾಯಣನನ್ನು ಆವಾಹಿಸಿ ಪೂಜಿಸಿ ಸೌತೆಕಾಯಿ, ಮೂಸರನ್ನ ನಿವೇದನೆ ಮಾಡಬೇಕು. ಹಾಗು ಕಲಶದ ಮೇಲೆ ಹೂದೆಸಿದ ವಸ್ತ್ರವನ್ನು ವಿಪ್ರರಿಗೆ ದಕ್ಷಿಣಿ ಸಹಿತ ದಾನ ಕೂಡಬೇಕು. ಈ ರೀತಿಯಾಗಿ ೭ ವರ್ಷ ಪರ್ಯಂತ ಮಾಡಬೇಕು. ಇದರಿಂದಾ ಜೀವನದಲ್ಲಿ ಬರುವ ತಾಪತ್ರಯಗಳು ಶಾಂತವಾಗುವವು.

೧೫) ಪುತ್ರದಾ ಏಕಾದಶಿವೃತ - ಶ್ರಾವಣ ಶುಕ್ಲ ಏಕಾದಶಿಗೆ ಪುತ್ರದಾ ಏಕಾದಶಿ ಎಂದು ಹೆಸರು. ಈ ದಿನ ವಿಧಿ ಪೂರ್ವಕವಾಗಿ ಉಪವಾಸವನ್ನು ಮಾಡಿ ದ್ವಾದಸಿ ದಿನದಂದು ಯೂಗ್ಯ ಬ್ರಾಹ್ಮಣನಿಗೆ ಭೂಜನ ಮಾಡಿಸಿ ದಕ್ಷಿಣಿ ಕೂಟ್ಟು ತಾನು ಪ್ರಸಾದ ಸ್ವೀಕರಿಸಬೇಕು. ಇದರಿಂದಾ ಸತ್ಪುತ್ರರು ಜನಿಸುವರು.

೧೬) ನ ಕರೋತಿ ವಿಧಾನೇನ ಪವಿತ್ರಾರೋಪಣಂ ತು ಯ:|

ತಸ್ಯ ಸಂವತ್ಸರೀಪೂಜಾ ನಿಷ್ಪಲಾ ಮುನಿಸತ್ತಮಂ ||

ಶ್ರಾವಣ ಶುಕ್ಲ ದ್ವಾದಶೀಯಂದು ಪವಿತ್ರಾರೋಪಣವೆಂಬ ಮಾಡಬೇಕು.ಇದರಿಂದಾ ತಾನು ಪ್ರತಿ ದಿನವು ಮಾಡುತ್ತಿರುವ ದೇವರ ಪೂಜೆಯು ಫಲವನ್ನು ಕೂಡುವದು. ಇಲ್ಲದಿದ್ದರೆ ಆ ವರ್ಷ ಪರ್ಯಂತರ ಮಾಡಿದ ಪೂಜೆಯು ನಿಷ್ಫಲವಾಗುವದು.

೧೭) ದುರ್ಗಾಷ್ಟಮಿ - ಇಂದು ದುರ್ಗಾ ದೇವಿಯನ್ನು ಪೂಜಿಸಿ ಏಂಟು ಬತ್ತಿಗಳುಳ್ಳ ದೀಪವನ್ನು ಬೆಳಗಿ ೧೦೮ ಪ್ರದಕ್ಷಿಣಿ ನಮಸ್ಕಾರವನ್ನು ಹಾಕಬೇಕು. ಹಾಗು ದೀಪವನ್ನು ಬ್ರಾಹ್ಮಣನಿಗೆ ದಾನ ಕೂಡಬೇಕು. ಇದರಿಂದಾ ಕನ್ನೆಯರಿಗೆ, ವರಗಳಿಗೆ ಯೋಗ್ಯವಾದ ಜೋಡಿಯೊಂದಿಗೆ ಶೀಘ್ರವಾಗಿ ಲಗ್ನವಾಗುವದು.
೧೮) ಕೃಷ್ಣಾಷ್ಟಮಿ - ವಿಶೆಷ ಲೇಖನ ಇಷ್ಟರಲ್ಲಿ ನೀರೀಕ್ಷಿಸಿರಿ.೧೯) ವಾಮನ ಜಯಂತಿ - ವಿಶೆಷ ಲೇಖನ ಇಷ್ಟರಲ್ಲಿ ನೀರೀಕ್ಷಿಸಿರಿ.
 
 

Monday, August 19, 2013

ಉಪಾಕರ್ಮ


ಉಪಾಕರ್ಮ

ಉಪಾಕರ್ಮವನ್ನು ಶ್ರಾವಣಮಾಸದಲ್ಲಿರುವ ಬರುವ ಶ್ರವಣಾ ನಕ್ಷತ್ರದ ದಿನದಂದು ಋಗ್ವೇದಿಗಳು, ಶ್ರಾವಣ ಶುಕ್ಲದ ಪೂರ್ಣಿಮಾದಂದು ಯಜುರ್ವೇದಿಗಳು ಉಪಾಕರ್ಮ ವನ್ನು ಮಾಡಿಕೊಳ್ಳಬೇಕು. ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.
ಅಲ್ಲದೇ! ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತ್ಯವ್ಯವನ್ನು ಸೂಚಿಸುತ್ತದೆ. ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋಪವೀತವು ದೇವ ಋಣ, ಋಷಿ‌ಋಣ ಮತ್ತು ಪಿತೃ‌ಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆ ಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರ ಬೇಕೆಂದು ತಿಳಿ ಹೇಳುತ್ತದೆ. ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ ತ್ರಿಕಾಲಸಂಧ್ಯಾವಂದನೆಯನ್ನು ಮಾಡಿಮುಗಿಸು ಎನ್ನುತ್ತಿದೆ ಈ ಯಜ್ಞೋಪವೀತವು. ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗ ವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವ ಸಂಕೇತ.
ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞ ನಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತ‌ಋಷಿಗಳನ್ನು ಪೂಜಿಸಿ, ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಟವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಠಗೊಳಿಸುವದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
 




ಉತ್ಸರ್ಜನ - ಉಪಾಕರ್ಮ ಎಂದರೇನು?

ಉತ್ಸರ್ಜನ ಎಂದರೆ ಬಿಡುವುದು ಎಂದರ್ಥ. ಯಾವುದನ್ನು ಬಿಡುವುದು ಎಂದರೆ ವೇದ ಗಳನ್ನು ಬಿಡುವುದು ಎಂದರ್ಥ. ಇದೇನಿದು ವೇದಗಳನ್ನು ಬಿಡುವುದು ಎಂದರೆ ಎನ್ನುವ ಸಂಶಯ ಬಂದರೆ ಇದಕ್ಕೆ ಹಿನ್ನೆಲೆ ಹೀಗಿದೆ - ಹಿಂದೆ ವೇದಕಾಲದಲ್ಲಿ ಋಷಿ-ಮುನಿಗಳು ವರ್ಷಪೂರ್ತಿ ವೇದಾಭ್ಯಾಸವನ್ನು ಮಾಡುತ್ತಿರಲಿಲ್ಲ. ಅದರಲ್ಲಿ ಸ್ವಲ್ಪ ದಿನಗಳ ಕಾಲ ವೇದಾಭ್ಯಾಸವನ್ನು ಬಿಟ್ಟು ವೇದದ ಅಂಗಗಳಾದ ಇನ್ನಿತರೇ ಶಾಸ್ತ್ರಗಳ ಅಧ್ಯಯನದಲ್ಲಿ, ಕೃಷ್ಯಾದಿಗಳಿಂದ ತಮ್ಮ ಉಪಜೀವನ ಕ್ಕೆ ಬೇಕಾದ ಧಾನ್ಯಸಂಗ್ರಹದಲ್ಲಿ ತೊಡಗುತ್ತಿದ್ದರು. ಅಂತಹ ಸಮಯದಲ್ಲಿ ವೇದಾಧ್ಯಯನವು ಅವಿಚ್ಛಿನ್ನವಾಗಿ ನಡೆಯಲು ಅಸಾಧ್ಯವಾದುದರಿಂದ, ಅಲ್ಲದೇ

ಅಧ್ಯಾಯೋತ್ಸರ್ಜನಂ ಮಾಘ್ಯಾಂ ಪೌರ್ಣಮಾಸ್ಯಾಂ ವಿಧೀಯತೇ |
ಅತ ಆರಭ್ಯ ಷಣ್ಮಾಸಾನ್ ಷಡಂಗಾನಿ ವಿಧೀಯತೇ ||

ಎನ್ನುವ ಪ್ರಮಾಣ ಶ್ಲೋಕ ದಿಂದ ಮಾಘ ಶುಕ್ಲ ಪೂರ್ಣಿಮಾದಂದು ವೇದಾಧ್ಯಯನವನ್ನು ಉತ್ಸರ್ಜನೆ ಮಾಡಿ (ಬಿಟ್ಟು) ವೇದದ ಅಂಗಗಳಾದ ಶಿಕ್ಷಾ, ವ್ಯಾಕರಣ, ಛಂಧಶ್ಶಾಸ್ತ್ರ, ನಿರುಕ್ತ, ಜ್ಯೋತಿಷ್ಯಶ್ಶಾಸ್ತ್ರ, ಕಲ್ಪ ಎನ್ನುವ ವಿದ್ಯೆಗಳನ್ನು ಕಲಿಯಲು ಪ್ರಾರಂಭಿಸುತ್ತಿದ್ದರು. ಈ ರೀತಿಯಾಗಿ ನಿರಂತರವಾಗಿ ವೇದದ ಅಧ್ಯಯನ ವನ್ನು ಬಿಡುವುದಕ್ಕೆ‘ಉತ್ಸರ್ಜನ‘ ಎಂದು ಕರೆಯುತ್ತಿದ್ದರು. ಅಂತಹ ಸಮಯದಲ್ಲಿ ವೇದ ಮಂತ್ರ ಗಳ ಅಧ್ಯಯನವು ಲೋಪವಾಗಿ ಆ ವೇದಮಂತ್ರಗಳಿಗೆ ಯಾತಯಾಮತಾ (ಒಂದು ಯಾಮ ದಷ್ಟು ಕಾಲ ಮೀರುವುದು) ದೋಷವು ಬರುತ್ತಿತ್ತು. ಅಂತಹ ದೋಷವು ಕಳೆದು ವರ್ಣಾಶ್ರಮೋಕ್ತ ಕರ್ಮಗಳು ವೀರ್ಯವತ್ತಾಗಿ ಫಲ ಕೊಡಬೇಕಾದರೆ ಆಯಾಯಾ ಶಾಖೆಯವರು ಸ್ವಶಾಖೋಕ್ತ ವಿಧಿಯಿಂದ ಶ್ರಾವಣ ಶುಕ್ಲ ಪೂರ್ಣಿಮಾ ಅಥವಾ ಶ್ರವಣ ನಕ್ಷತ್ರದ ದಿನದಂದು ವೇದದ್ರಷ್ಟಾರ ರಾದ ಋಷಿಗಳನ್ನು ಪೂಜಿಸಿ, ಅವರ ಅನುಗ್ರಹದಿಂದ ನೂತನ ಯಜ್ಞೋಪವೀತವನ್ನು ಧಾರಣೆ ಮಾಡಿ ಪುನಃ ವೇದಾಧ್ಯಯನ - ಅಧ್ಯಾಪನವನ್ನು ಸ್ವೀಕರಿಸುವುದಕ್ಕೆ ‘ಉಪಾಕರ್ಮ‘ ಎಂದು ಕರೆಯುತ್ತಿದ್ದರು. ಈ ರೀತಿಯಾಗಿ ಉಪಾಕರ್ಮವನ್ನು ಏಕೆ ಮಾಡಬೇಕೆಂದರೆ ’ಅಯಾತಯಾಮ ಛಂದೋಭಿಃ ಯತ್ಕರ್ಮಸಿದ್ಧಿಕಾರಣಮ್‘ ಎಂದು ಹೇಳಿರುವುದರಿಂದ ನಾವು ಮಾಡುವಂತಹ ಕರ್ಮಗಳು ಸಿದ್ಧಿಯಾಗಬೇಕಾದರೆ ಅಯಾತಯಾಮ (ಯಾತಯಾಮತಾ ದೋಷವಿಲ್ಲದಿರುವ) ಮಂತ್ರಗಳಿಂದ ಮಾತ್ರ ಸಾಧ್ಯ. ಆದುದರಿಂದ ಮಾಘ ಮಾಸದಲ್ಲಿ ಉತ್ಸರ್ಜನವನ್ನು, ಶ್ರಾವಣ ಮಾಸದಲ್ಲಿ ಉಪಾಕರ್ಮವನ್ನು
ಅವಶ್ಯವಾಗಿ ಮಾಡಲೇಬೇಕು.
ಆದರೆ ಪ್ರಕೃತದಲ್ಲಿ ಶ್ರಾವಣ ಮಾಸ ದಲ್ಲಿಯೇ ಉತ್ಸರ್ಜನ - ಉಪಾಕರ್ಮ ಎರಡನ್ನೂ ಮಾಡುವ ಸಂಪ್ರದಾಯವು ಬೆಳೆದು ಬಂದಿದೆ. ಆ ದಿನ ಋಗ್ವೇದಿಗಳು ಅರುಂಧತೀ ಸಹಿತರಾದ ಸಪ್ತರ್ಷಿಗಳನ್ನು, ಯಜುರ್ವೇದಿಗಳು ನವಕಾಂಡ ಋಷಿಗಳನ್ನು ಸ್ಥಾಪನೆ ಮಾಡಿ, ಷೋಡಶೋಪಚಾರ ಪೂಜೆಗಳಿಂದ, ಚರುವಿನಿಂದ ಹೋಮವನ್ನು ಮಾಡಿ, ಉತ್ಸೃಷ್ಟಾಃ ವೈ ವೇದಾಃ ಎಂದು ವೇದವನ್ನು ತ್ಯಾಗ ಮಾಡಿ, (ಮಂತ್ರ) ಸ್ನಾನವನ್ನು ಮಾಡಿ, ಉತ್ಸರ್ಜನಾಂಗವಾಗಿ ದೇವರ್ಷಿಪಿತೃ ತರ್ಪಣವನ್ನು ಕೊಟ್ಟು ಸ್ಥಾಪಿಸಿದ ಋಷಿಗಳನ್ನು ಉದ್ವಾಸನೆ ಮಾಡಿ ಕೃಷ್ಣಾರ್ಪಣವನ್ನು ಬಿಡಬೇಕು. ಆನಂತರ ಪುನಃ ಋಷಿಗಳನ್ನು ಆಹ್ವಾನಿಸಿ, ಪೂಜೆ, ಯಜ್ಞೋಪವೀತ ಸಹಿತವಾದ ಹೋಮವನ್ನು ಮುಗಿಸಿ, ಉಪಕೃತಾಃ ವೈ ವೇದಾಃ ಎಂದು ಉದ್ಘೋಷಿಸಿ, ಋಷಿಗಳ ಅಪ್ಪಣೆ ಪಡೆದು ವೇದಗಳನ್ನು ಸ್ವೀಕರಿಸಿ, ಹೋಮಶೇಷವಾದ ಸಕ್ತು (ಹಿಟ್ಟನ್ನು) ವನ್ನು ಭಕ್ಷಿಸಿ, ಯಜ್ಞೋಪವೀತ ದಾನ, ಧಾರಣೆ, ಬ್ರಹ್ಮಯಜ್ಞವನ್ನು ಮುಗಿಸಿ ಮಾಡಿದ ಕರ್ಮವನ್ನು ಭಗವಂತನಿಗೆ ಸಮರ್ಪಿಸಿ, ಭಗವಂತನ ಅನುಗ್ರಹವನ್ನು ಪಡೆಯುವುದೇ ಉಪಾಕರ್ಮದ ಉದ್ದೇಶ.

Sunday, August 11, 2013

ಶ್ರಾವಣ ಮಾಸ

                       
ಶ್ರಾವಣ ಮಾಸವು ಶ್ರೀಧರ ಹಾಗು ಶ್ರೀ ಧನ್ಯ ದೇವತೆಯುಳ್ಳದ್ದು. ಪೂರ್ಣಿಮಾದಲ್ಲಿ ಶ್ರವಣಾ ನಕ್ಷತ್ರದ ಯೋಗವಿರುವಾಗ ಶ್ರಾವಣ ಮಾಸವು ಬರುತ್ತದೆ. ಶ್ರಾವಣದಲ್ಲಿ ಮಾಡಿದ ಭಗವನ್ಮಹಿಮೆಯ ಮಂತ್ರಸಿದ್ಧಿಯನ್ನು ಕೊಡುವದರಿಂದಲೂ ಶ್ರಾವಣಮಾಸ ಯನಿಸಿದೆ. ಶ್ರಾವಣಮಾಸದ ಯಾವ ದಿನವೂ ವೃತರಹಿತವಾಗಿಲ್ಲಾ. ಒಂದು ದಿನವೂ ವೃತ ಮಾಡದೇ ಶ್ರಾವಣವನ್ನು ಯಾರು ಕಳೆಯುವರೋ ಅವರು ನರಕವನ್ನು ಹೊಂದುವರು.

ವೃತಗಳು-
೧) ಏಕ ಭುಕ್ತವೃತ.
೨) ಮಂಗಳ ಗೌರಿ ವೃತ.
೩) ಬುಧ,ಭ್ರಹಸ್ಪತಿ ವೃತ.
೪) ಜೀವಂತಿಕಾ ವೃತ.
೫) ಶನೇಶ್ವರ ವೃತ.
೬) ರೋಟಿಕಾ ವೃತ.
೭) ದೂರ್ವಾಗಣಪತಿ ವೃತ.
೮) ಅನಂತ ವೃತ.
೯) ನಾಗಚತುರ್ಥಿ
೧೦) ನಾಗ ಪಂಚಮಿ
೧೧) ಗರುಡ ಪಂಚಮಿ.
೧೨) ಸಿರಿಯಾಳ ಷಷ್ಟಿ.
೧೩) ಅವ್ಯಂಗ ವೃತ.
೧೪) ಶೀತಲಾಸಪ್ತಮಿ ವೃತ.
೧೫) ಪುತ್ರದಾ ಏಕಾದಶಿ ವೃತ.
೧೬) ಪವಿತ್ರಾರೋಪಣವೃತ
೧೭) ದುರ್ಗಾಷ್ಟಮಿ.
೧೮) ಕೃಷ್ಣಾಷ್ಟಮಿ.
೧೯) ವಾಮನ ಜಯಂತಿ.
೨೦) ಅಗಸ್ತ್ಯಾರ್ಘ್ಯ
೨೧) ಮಹಾಲಕ್ಷ್ಮೀವೃತ.

೧) ಏಕಭುಕ್ತ ವೃತ-
ದಿನಕ್ಕೆ ಒಂದುಬಾರಿ ಮಾತ್ರ ಊಟವನ್ನು ಮಾಡಬೇಕು. ಬೆಳಗಿನಿಂದಾ ಉಪವಾಸವಿದ್ದು ಸಂಜೆ ೪.೦೦ ಘಂಟೆಗೆ ಊಟವನ್ನು ಮಾಡಿ ಮತ್ತೆ ಫಲಹಾರಾದಿಗಳನ್ನು ಮಾಡದೇ ಶ್ರೀಧರನ ಪ್ರೀತಿಗಾಗಿ ತುಪ್ಪ, ಕ್ಷೀರ, ಹಣ್ಣು ಮೊದಲಾದವುಗಳನ್ನು ಬ್ರಾಹ್ಮಣನಿಗೆ ದಾನ ಮಾಡಬೇಕು.

೨) ಮಂಗಳ ಗೌರಿವೃತ -

ಮಾಸದಲ್ಲಿ ಬರುವ ೪/೫ ಮಂಗಳವಾರದಲ್ಲಿ ಈ ವೃತವನ್ನ ಮಾಡಬೇಕು. ನವ ವಿವಾಹಿತ ಸ್ತ್ರೀಯರು ವಿವಾಹ ವರ್ಷದಿಂದಾ ೫ ವರ್ಷ ಪರ್ಯಂತ ಈ ವ್ರುತವನ್ನು ಮಾಡಬೇಕು. ಮೂದಲ ವರ್ಷ ತಾಯಿಯ ಮನೆಯಲ್ಲಿಯೂ, ನಂತರದ ವರ್ಷಗಳಲ್ಲಿ ಪತಿಯ ಮನೆಯಲ್ಲಿಯೂ ಆಚರಿಸತಕ್ಕದ್ದು.

) ಬುಧ, ಬ್ರಹಸ್ಪತಿ ವೃತ -
ಶ್ರಾವಣ ಮಾಸದಲ್ಲಿ ಬರುವ ಬುಧ-ಗುರು ವಾರಗಳಲ್ಲಿ ಬುಧ,ಬ್ರಹಸ್ಪತಿಯರನ್ನು ಪೂಜಿಸಿದರೆ ಇಷ್ಟಾರ್ಥಗಳೆಲ್ಲಾ ಸಿದ್ದಿಸುವವು. ಮೊಸರನ್ನವನ್ನು ನಿವೇದನೆ ಮಾಡಿ ಬ್ರಾಹ್ಮಣನಿಗೆ ಭೋಜನ ಮಾಡಿಸಬೇಕು. ಸ್ತ್ರೀಯರು ತೊಟ್ಟಿಲ ಮೇಲ್ಬಾಗದಲ್ಲಿ ಬುಧ-ಗುರು ಚಿತ್ರ ಬರೆದು ಪೂಜಿಸಿದರೆ ಸತ್ಪುತ್ರರು ಜನಿಸುವರು. ಪಾಕ ಶಾಲೆಯಲ್ಲಿ ಪೂಜಿಸಿದರೆ, ಪಾಕ ಸಮೃದ್ಧಿಯಾಗುವದು. ಧನಾಗಾರದಲ್ಲಿ ಪೂಜಿಸಿದರೇ ಧನವು ಅಭಿವೃದ್ದಿ ಯಾಗುವದು. ಇದನ್ನು ಏಳು ವರ್ಷಗಳವರೆಗೆ ಮಾಡಬೆಕು.

೪) ಜಿವಂತಿಕಾ ವೃತ-
ಜಿವಂತಿಕಾ ದೇವಿ ಎಂದರೆ ಸಂತಾನ ಲಕ್ಷ್ಮೀ. ಶ್ರಾವಣ ಶುಕ್ಲ ಶುಕ್ರವಾರದಂದು ಅನೇಕ ಮಕ್ಕಳೂಡಗೂಡಿ ಜೀವಂತಿಕಾದೇವಿಯ ಚಿತ್ರವನ್ನು ಬರೆದು ಷೊಡಷೊಪಚಾರಗಳಿಂದ ಪೊಜಿಸಬೆಕು. ಗೊದಿ ಹಿಟ್ಟಿನಿಂದ ಐದು ಹಣತೆಗಳನ್ನು ಮಾಡಿ ತುಪ್ಪದ ಬತ್ತಿಯಿಂದಾ ಆರತಿ ಮಾಡಬೆಕು. ನಂತರ ಹಣತೆಗಳನ್ನು ತುಪ್ಪದಲ್ಲಿ ಕರೆದು ಸ್ವತ; ಭಕ್ಷಿಸಬೇಕು. ವೃತ ನಿರತರು ಹಸಿರು ಸೀರೆ, ಕುಪ್ಪುಸ, ಬಳೆಗಳನ್ನು ಧರಿಸಬಾರದು. ಹಸಿರು ಬಣ್ಣದ ಕಾಯಿಪಲ್ಯಗಳನ್ನೂ ಬಳಸಬಾರದು. ಅಕ್ಕಿ ತೊಳೆದ ನೀರನ್ನು ಎಂದೂ ದಾಟಬಾರದು. ವೃತಾಚರಣೆಯಿಂದಾ ಗರ್ಭದಲ್ಲಿ ಬದುಕಿ ಜೇವಂತವಾಗಿರುವ ಮಕ್ಕಳೇ ಹುಟ್ಟುವರು.

೫) ಶ್ರಾವಣ ಮಾಸದ ಪ್ರತಿ ಶನಿವಾರ ಶನೇಶ್ವರ, ವಾಯು,ಹಾಗು ನೃಸಿಂಹದೇವರ ಪೂಜೆಯನ್ನು ಷೂಡಶೂಪಚಾರಗಳಿಂದ ಮಾಡಬೇಕು ಯಜಮಾನನು ಅಂದು ಏಳ್ಳೆಣ್ಣೆಯಿಂದಾ ಅಭ್ಯಂಜನವನ್ನು ಮಾಡಬೆಕು. ಹಾಗು ಒಬ್ಬ ವಿಪ್ರರನ್ನು ಆಮಂತ್ರಿಸಿ ಅವರಿಗೂ ಏಳ್ಳೆಣ್ಣೆಯಿಂದಾ ಅಭ್ಯಂಜನ ಮಾಡಿಸಬೆಕು. ವಿಪ್ರನು ಕುಂಟನಾಗಿದ್ದರೆ ಉತ್ತಮ. ಏಕೆಂದರೆ ಶನಿದೇವರು ಕುಂಟನಾದ್ದರಿಂದಾ. ಶನಿದೇವರನ್ನು ಶನ್ನೂದೇವಿ ರಭಿಷ್ಟಯಾ... ಮಂತ್ರದಿಂದಾ, ಹನುಮಂತ ದೇವರನ್ನು ಬುದ್ದಿರ್ಭಲಂ.... ಮಂತ್ರದಿಂದಾ, ಹಾಗು ನೃಸಿಂಹ ದೇವರನ್ನು ಉಗ್ರಂ ವಿರಂ .... ಮಂತ್ರದಿಂದಾ ಆವ್ಹಾನಿಸಿ ಪೂಜಿಸಬೇಕು. ವಿಪ್ರರಿಗೆ ಭೋಜನ ಮಾಡಿಸಿ ಏಳ್ಳೆಣ್ಣೆ, ಕಬ್ಬಿಣಪಾತ್ರೆ, ಏಳ್ಳು, ಫಲ, ತಾಂಬೂಲಗಳೂಂದಿಗೆ ದಕ್ಷಿಣಾದಿಗಳನ್ನು ಕೂಟ್ಟು ಶನಿಯು ಪ್ರೀತನಾಗಲಿ ಎಂದು ಕೃಷ್ಣಾರ್ಪಣ ಬಿಡಬೇಕು. ಈ ವೃತದಿಂದಾ ಲಕ್ಷ್ಮೀ ಸ್ತಿರವಾಗಿ ನಿಲ್ಲುವಳು, ಪಂಚಮ, ಅಷ್ಟಮ, ಎಳುವರೆಶನಿಯ ಕಾಟಗಳು ಇರುವದಿಲ್ಲಾ.

) ರೋಟಿಕಾವೃತ- ರೋಟಿಕಾವೃತವು ಶ್ರಾವಣ ಮಾಸದ ಶುಕ್ಲ ಪ್ರತಿಪದಾ ಸೋಮವಾರ ಬಂದರೆ ಅಂದಿನಿಂದಾ ೫ ವಾರಗಳಕಾಲ ಆಚರಿಸಬೇಕು. ಈ ದಿನಗಳಲ್ಲಿ ರುದ್ರಾಂತರ್ಮಿಯಾದ ಸಂಕರ್ಷಣನನ್ನು "ತ್ರ್ಯಯಂಬಕಂ ಯಜಾಮಹೇ.... ಮಂತ್ರದಿಂದಾ ಆಹ್ವಾನಿಸಿ ಬಿಲ್ವ ಹಾಗು ನಾನಾ ತರದ ಪುಷ್ಪಗಳಿಂದಾ ಪೂಜಿಸಿ (೫) ಐದು ರೂಟ್ಟಿಗಳನ್ನು ನೇವೈದ್ಯವೆಂದು ಅರ್ಪಿಸಬೆಕು. ಅದರಲ್ಲಿ ೨ ನ್ನು ವಿಪ್ರರಿಗೆ, ೨ ನ್ನು ಪೂಜಕನಿಗೂ, ಒಂದನ್ನು ಭಗವಂತನಿಗೆ ಅರ್ಪಿಸಬೆಕು. ಭಗವಂತನಿಗೆ ಅರ್ಪಿಸಿದ ರೂಟ್ಟಿಯನ್ನು ಗೋವಿಗೆ ಕೂಡಬೇಕು. ಈ ವೃತಚರಣೆಯಿಂದಾ ಸಪ್ತದ್ವೀಪಸಹಿತ ಭೂಮಿಯನ್ನು ದಾನ ಮಾಡಿದರೆ ಬರುವ ಫಲ ದೂರಕುವದು. ಈರಿತಿಯಾಗಿ ೫ ವರ್ಷಗಳ ಪರ್ಯಂತರ ಮಾಡಿ ನಂತರ ಉದ್ಯಾಪನೆಯನ್ನು ಮಾಡಿ ವೃತ ಸಮಾಪ್ತಿ ಮಾಡಬೆಕು. 


ಸಶೇಷ...

ಸಂಗ್ರಹ -
ಶ್ರೀ ಗುರುರಾಜಾಚಾರ್ ಪುಣ್ಯವಂತ,
ಹುಬ್ಬಳ್ಳಿ

 


 

Friday, July 26, 2013

ಶುಕ್ಲ ಯಜುರ್ವೇದೀಯ ವೈಶ್ವದೇವ


                      // ಶ್ರೀಶಂ ವಂದೇ ಜಗದ್ಗುರುಂ //
                        ಶುಕ್ಲ ಯಜುರ್ವೇದೀಯ ವೈಶ್ವದೇವ

 ೧)  ಆಚಮನಂ -
ಓಂ ಕೇಶವಾಯ ಸ್ವಾಹಾ | ಓಂ ನಾರಾಯಣಾಯ ಸ್ವಾಹಾ | ಓಂ ಮಾಧವಾಯ ಸ್ವಾಹಾ | (ಎಂದು ಮೂರು ಸಲ ಒಂದು ಉದ್ಧರಣೆ ನೀರನ್ನು ಸ್ವೀಕರಿಸಬೇಕು.) ಓಂ ಗೋವಿಂದಾಯ ನಮಃ, ( ಇತಿ ದಕ್ಷಿಣ ಪಾಣಿಂ ಪ್ರಕ್ಷಾಲ್ಯ (ಎರಡೂ
ಕೈಗಳನ್ನು ತೊಳೆಯುವದು)) ಓಂ ವಿಷ್ಣವೇ ನಮಃ ಓಂ ಮಧುಸೂದನಾಯ ನಮಃ (ಮೇಲಿನ ತುಟಿಯ ಸ್ಪರ್ಶ), ಓಂ ತ್ರಿವಿಕ್ರಮಾಯ ನಮಃ (ಕೆಳ ತುಟಿ), ಓಂ ವಾಮನಾಯ ನಮಃ (ಬಲಗಲ್ಲ), ಓಂ ಶ್ರೀಧರಾಯ ನಮಃ (ಎಡಗಲ್ಲ), ಓಂ ಹೃಷೀಕೇಶಾಯ ನಮಃ (ಹಸ್ತ), ಓಂ ಪದ್ಮನಾಭಾಯ ನಮಃ (ಪಾದ), ಓಂ ದಾಮೋದರಾಯ ನಮಃ (ಶಿರಸ್ಸು), ಓಂ ಸಂಕರ್ಷಣಾಯ ನಮಃ (ಮುಖ), ಓಂ ವಾಸುದೇವಾಯ ನಮಃ (ಮೂಗಿನ ಬಲ ಹೊರಳೆ), ಓಂ ಪ್ರದ್ಯುಮ್ನಾಯ ನಮಃ (ಮೂಗಿನ ಎಡ ಹೊರಳೆ)  ಓಂ ಅನಿರುದ್ಧಾಯ ನಮಃ (ಬಲ ಕಣ್ಣು), ಓಂ ಪುರುಷೋತ್ತಮಾಯ ನಮಃ (ಎಡ ಕಣ್ಣು), ಓಂ ಅಧೋಕ್ಷಜಾಯ ನಮಃ (ಬಲ ಕಿವಿ), ಓಂ ನಾರಸಿಂಹಾಯ ನಮಃ (ಎಡ ಕಿವಿ), ಓಂ ಅಚ್ಯುತಾಯ ನಮಃ (ನಾಭಿ), ಓಂ ಜನಾರ್ದನಾಯ ನಮಃ (ಹೃದಯ), ಓಂ ಉಪೇಂದ್ರಾಯ ನಮಃ
(ಶಿರಸ್ಸು), ಓಂ ಹರಯೇ ನಮಃ (ಬಲಭುಜ), ಓಂ ಶ್ರೀ ಕೃಷ್ಣಾಯ ನಮಃ (ಎಡ ಭುಜ) 

೨) ಪ್ರಾಣಾಯಾಮಃ -
ಅಸ್ಯ ಶ್ರೀ ಪ್ರಣವ ಮಂತ್ರಸ್ಯ ಪರಬ್ರಹ್ಮ ಋಷಿಃ | ಗಾಯತ್ರೀ ಛಂದಃ | ಪರಮಾತ್ಮಾ ದೇವತಾ ಪ್ರಾಣಾಯಾಮೇ ವಿನಿಯೋಗಃ || ಒಂದು ಉದ್ಧರಣೆ ನೀರನ್ನು ಬಿಡಬೇಕು)
 ಮಂತ್ರ :
ಓಂ ಭೂಃ | ಓಂ ಭುವಃ | ಓಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಂ ಸತ್ಯಂ || ಓಂ ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ || ಧಿಯೋ ಯೋ ನಃ ಪ್ರಚೋದಯಾತ್ || ಓಂ ಆಪೋ ಜ್ಯೋತೀರಸೋಮೃತಂ ಬ್ರಹ್ಮ ಭೂರ್ಭುವಃಸ್ವರೋಂ || (ಇದೇ ರೀತಿಯಾಗಿ ಮೂರು ಸಾರಿ ಉಚ್ಛರಿಸಿ ಪ್ರಾಣಾಯಾಮ ಮಾಡಬೇಕು.)

೩)  ಸಂಕಲ್ಪ -
 ಶುಭೇ ಶೋಭನೇ ಮುಹೂರ್ತೇ ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮ ಚರಣೇ, ಭಾರತ ವರ್ಷೇ, ಭರತ ಖಂಡೇ, ಜಂಬೂ ದ್ವೀಪೇ, ಬ್ರಹ್ಮಣಃ ದ್ವಿತೀಯ ಪರಾರ್ಧೇ, ಪುಣ್ಯೋದಯೇ, ದಂಡಕಾರಣ್ಯೇ ದೇಶೇ, ಗೋದಾವರ್ಯಾಃ ದಕ್ಷಿಣೇ ತೀರೇ, ಶಾಲಿವಾಹನ ಶಕೇ, ಬೌದ್ಧಾವತಾರೇ, ರಾಮ ಕ್ಷೇತ್ರೇ, ಅಸ್ಮಿನ್ ವರ್ತಮಾನೇ  ಚಾಂದ್ರಮಾನೇನ ...... ಸಂವತ್ಸರೇ ..... ಅಯನೇ .... ಋತೌ ... ಮಾಸೇ .... ಪಕ್ಷೇ .... ತಿಥೌ .... ವಾಸರೇ .... ನಕ್ಷತ್ರೇ ಶುಭಯೋಗೇ, ಶುಭ ಕರಣೇ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಅಗ್ನ್ಯಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಹರಿಣೀಪತಿ ಪರಶುರಾಮಪ್ರೀತ್ಯರ್ಥಂ ಪಂಚಮಹಾಯಜ್ಞಾಂಗ ಪ್ರಾತಃ/ಸಾಯಂ ವೈಶ್ವದೇವಾಖ್ಯಂ ಕರ್ಮ ಕರಿಷ್ಯೇ | ತದಂಗ ಪಂಚಭೂಸಂಸ್ಕಾರಪೂರ್ವಕ ಅಗ್ನಿಪ್ರತಿಷ್ಠಾಪನಂ ಅಹಂ ಕರಿಷ್ಯೇ || ತತ್ರ ದರ್ಭೈಸ್ತುಲಸೀದಲೇನ ವಾ ಪ್ರದಕ್ಷಿಣೇನ ಪರಿಸಮುಹ್ಯ ಇತಿ ತ್ರಿವಾರಂ ಪರಿಸಮುಹ್ಯ | ಗೋಮಯೋದಕೇನ ಪಶ್ಚಿಮಾದಾರಭ್ಯ ಪ್ರಾಗಾಂತಂ ಉಪಲಿಪ್ಯ || ಯಜ್ಞಕಾಷ್ಠೇನ ತ್ರಿರುಲ್ಲಿಖ್ಯ | ಅಂಗುಷ್ಠ - ಅನಾಮಿಕಾಭ್ಯಾಂ ಪ್ರಾಂಚಃ ಪಾಂಸೂನುದ್ಧೃತ್ಯ || ಕುಶೋದಕೈಃ ತ್ರಿರಭ್ಯುಕ್ಷ್ಯ || ಆಗ್ನೇಯಕೋಣೇ ಅಗ್ನಿಂ ನಿಧಾಯ || ತತ್ರ ಲೌಕಿಕಾಗ್ನಿಂ ತಾಮ್ರಪಾತ್ರೇಣ ಮೃತ್ಪಾತ್ರೇಣ ವಾ ಆನೀಯ ||

೪)     ಅನ್ವಗ್ನಿರಿತ್ಯಸ್ಯ ಮಂತ್ರಸ್ಯ ಪುರೋಧಾಃ ಋಷಿಃ ತ್ರಿಷ್ಟುಪ್ ಛಂದಃ ಅಗ್ನಿಃ ದೇವತಾ, ಅಗ್ನ್ಯಾನಯನೇ ವಿನಿಯೋಗಃ
 ಓಮ್ ಅನ್ವಗ್ನಿರುಷಸಾಮಗ್ರಮಖ್ಯದನ್ವಹಾನಿ ಪ್ರಥಮೋ ಜಾತವೇದಾಃ | 
     ಅನುಸೂರ್ಯಸ್ಯ  ಪುರುತ್ರಾಚ ರಶ್ಮೀನನುದ್ಯಾವಾ ಪೃಥಿವೀ ಆತತಂಥ || ಇತ್ಯನೇನ ಪಾಕಶಾಲಾಯಾಃ ಲೌಕಿಕಾಗ್ನಿಮಾದಾಯ

೫)    ಅಗ್ನಿ ಪ್ರತಿಷ್ಠಾಪನಂ.
 ಪೃಷ್ಟೋದಿವೀತಿ ಮಂತ್ರಸ್ಯ ಕುತ್ಸಃ ಋಷಿಃ ತ್ರಿಷ್ಟುಪ್ ಛಂದಃ ವೈಶ್ವಾನರಃ ದೇವತಾ ಅಗ್ನಿಪ್ರತಿಷ್ಠಾಪನೇ ವಿನಿಯೋಗಃ.
 ಓಂ ಪೃಷ್ಟೋದಿವಿ ಪೃಷ್ಟೋ ಅಗ್ನಿಃ ಪೃಥಿವ್ಯಾಂ ಪೃಷ್ಟೋ ವಿಶ್ವಾ ಓಷಧೀರಾವಿವೇಶ |
 ವೈಶ್ವಾನರಃ ಸಹಸಾ ಪೃಷ್ಟೋ ಅಗ್ನಿಃ ಸನೋದಿವಾ ಸರಿಷಸ್ಪಾತು ನಕ್ತಂ || ಇತಿ ಪಾವಕ ನಾಮಾನಂ ಅಗ್ನಿಂ ಪ್ರತಿಷ್ಠಾಪ್ಯ || ಸುಪ್ರತಿಷ್ಟಿತಮಸ್ತು || ತ್ರಿಭಿಃ ಸಾವಿತ್ರೈಃ ಪ್ರಜ್ವಾಲ್ಯ ||

೬)  ಅಗ್ನಿ ಪ್ರಜ್ವಾಲನಂ -
ತತ್ಸವಿತುಃ ಇತ್ಯಸ್ಯ ಮಂತ್ರಸ್ಯ ವಿಶ್ವಾಮಿತ್ರ ಋಷಿಃ ಗಾಯತ್ರೀ ಛಂದಃ ಸವಿತಾ ದೇವತಾ | ತಾƒಸವಿತುರಿತ್ಯಸ್ಯ ಮಂತ್ರಸ್ಯ ಕಣ್ವಋಷಿಃ ತ್ರಿಷ್ಟುಪ್ ಛಂದಃ ಸವಿತಾ ದೇವತಾ || ವಿಶ್ವಾನಿ ದೇವ ಇತ್ಯಸ್ಯ ಮಂತ್ರಸ್ಯ ನಾರಾಯಣ ಋಷಿಃ ಗಾಯತ್ರೀ ಛಂದಃ ಸವಿತಾ ದೇವತಾ ಸರ್ವೇಷಾಂ ಅಗ್ನಿಪ್ರಜ್ವಾಲನೇ ವಿನಿಯೋಗಃ ||
     ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ || ಓಂ ತಾƒಸವಿತುರ್ವರೇಣ್ಯಸ್ಯ ಚಿತ್ರಾಮಾಹƒವ್ವೃಣೇ ಸುಮತಿಂ ವಿಶ್ವಜನ್ಯಾಂ|
     ಯಾಮಸ್ಯ ಕಣ್ವೋ ಅದುಹತ್ಪ್ರಪೀನಾƒ ಸಹಸ್ರಧಾರಾಂ ಪಯಸಾ ಮಹೀಂ ಗಾಂ ||
  ಓಂ ವಿಶ್ವಾನಿ ದೇವಸವಿತರ್ದುರಿತಾನಿ ಪರಾ ಸುವ | ಯದ್ಭದ್ರಂ ತನ್ನ ಆಸುವ || {ಏಭಿಃ ತ್ರಿಮಂತ್ರೈಃ ವೇಣುನಲಿಕಯಾ ಅಗ್ನಿಂ ಪ್ರಜ್ವಾಲ್ಯ}

೭)  ಅಗ್ನಿಪುರುಷ ಧ್ಯಾನಂ -
ಚತ್ವಾರಿಶೃಂಗ ಇತ್ಯಸ್ಯ ಮಂತ್ರಸ್ಯ ವಾಮದೇವ ಋಷಿಃ ತ್ರಿಷ್ಟುಪ್ ಛಂದಃ  ಯಜ್ಞಪುರುಷೋ ದೇವತಾ ಧ್ಯಾನೇ ವಿನಿಯೋಗಃ -
 ಓಂ ಚತ್ವಾರಿಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತಹಸ್ತಾಸೋ ಅಸ್ಯ | ತ್ರಿಧಾಬದ್ಧೋ ವೃಷಭೋ ರೋರವೀತಿ ಮಹೋದೇವೋ ಮƒರ್ತ್ಯಾಂ ಆವಿವೇಶ ||
     ಸ್ಮೃತಿಮಂತ್ರಾಶ್ಚ - ಸಪ್ತಜಿಹ್ವಂ ತ್ರಿಪಾದಂಚ ಸಪ್ತಹಸ್ತಂ ದ್ವಿನಾಸಿಕಂ |
     ಚತುರ್ವಕ್ತ್ರಂ ಷಳಕ್ಷಂ ಚ ಚತುಃಶೃಂಗಂ ದ್ವಿಶೀರ್ಷಕಂ ||
     ಸ್ವಾಹಾಂ ತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ | 
     ಬಿಭ್ರಾಣಂ ದಕ್ಷಿಣೈಃ ಹಸ್ತೈಃ ಶಕ್ತಿಮಿಧ್ಮಂ ಸ್ರುವಂ ಸ್ರುಚಂ ||
     ತೋಮರಂ ವ್ಯಜನಂ ವಾಮೇ ಘೃತಪಾತ್ರಂ ತಥೈವ ಚ |
     ಮೇಷಾರೂಢಂ ಸುಖಾಸೀನಂ ಜಟಾಮುಕುಟಮಂಡಿತಂ ||
     ಸ್ವಾತ್ಮಾಭಿಮುಖಮಾಸೀನಂ ಧ್ಯಾಯೇದ್ದೇವಂ ಹುತಾಶನಂ ||

೮)  ಅಗ್ನಿ ಸಮ್ಮುಖೀಕರಣಂ -
ಏಷೋಹ ದೇವ ಇತ್ಯಸ್ಯ ಮಂತ್ರಸ್ಯ ಪ್ರಜಾಪತಿಃ ಋಷಿಃ ತ್ರಿಷ್ಟುಪ್ ಛಂದಃ ಪಮಾತ್ಮಾ ದೇವತಾ ಅಗ್ನಿ ಸಮ್ಮುಖೀಕರಣೇ ವಿನಿಯೋಗಃ ||
     ಓಂ ಏಷೋಹ ದೇವಃ ಪ್ರದಿಶೋನು ಸರ್ವಾಃ ಪೂರ್ವೋ ಹ ಜಾತಃ ಸ ಉ ಗರ್ಭೇ ಅಂತಃ |
     ಸ ಏವ ಜಾತಃ ಸಜನಿಷ್ಯಮಾಣಃ ಪ್ರತ್ಯಙ್ಜನಾಸ್ತಿಷ್ಠತಿ ಸರ್ವತೋ ಮುಖಃ ||
     ಭೋ ಅಗ್ನೇ ಶಾಂಡಿಲ್ಯ ಗೋತ್ರ ಮೇಷಾರೋಢ ಪ್ರಾಂಗ್ಮುಖ ದೇವ ಮಮ ಸಮ್ಮುಖೋ ಭವ | ಇತಿ ಸಾಕ್ಷತೋದಕಪಾಣಿಭ್ಯಾಂ ಅಗ್ನಿಂ ಅಭಿಮುಖೀ ಕೃತ್ಯ ಪರಿಷೇಚನಂ || ತತಃ ಗಂಧಪುಷ್ಪಾಕ್ಷತಾನ್ ಗೃಹೀತ್ವಾ ಪ್ರಾಗಾದಿ ದಿಕ್ಷು ಪೂಜಯೇತ್ ||

೯)  ಅಗ್ನ್ಯಲಂಕರಣಂ -
    ಓಂ ಅಗ್ನಯೇ ನಮಃ, ಓಂ ಹುತವಾಹನಾಯ ನಮಃ, ಓಂ ಹುತಾಶನಾಯ ನಮಃ, ಓಂ ಕೃಷ್ಣವರ್ತ್ಮನೇ ನಮಃ,
 ಓಂ ಸಪ್ತಜಿಹ್ವಾಯ ನಮಃ, ಓಂ ವೈಶ್ವಾನರಾಯ ನಮಃ, ಓಂ ಜಾತವೇದಸೇ ನಮಃ, ಓಂ ಯಜ್ಞಪುರುಷಾಯ ನಮಃ. - ಗಂಧಪುಷ್ಪಾಕ್ಷತಾನ್ ಸಮರ್ಪಯಾಮಿ || ತತಃ ಅಗ್ನಿಂ ಪ್ರಜ್ವಾಲ್ಯ | ಚರುಂ ಅಭಿಘಾರ್ಯ | ಗಾಯತ್ರ್ಯಾ ಅನ್ನಂ ಪ್ರೋಕ್ಷ್ಯ | ಮುಖಂ ಯಃ ಸರ್ವದೇವಾನಾಂ ಹವ್ಯಭುಕ್ಕವ್ಯಭುಕ್ತಥಾ |ಪಿತೄಣಾಂ ಚ ನಮಸ್ತಸ್ಮೈ ವಿಷ್ಣವೇ ಪಾವಕಾತ್ಮನೇ || ಇತಿ ಸ್ವಾಹಾಕಾರೇಣ ಜುಹುಯಾತ್ | ದಕ್ಷಿಣಜಾನ್ವಾ ಚ ಹೃದಿ ಸವ್ಯ ಹಸ್ತಂ ನಿಧಾಯ ಪ್ರದೀಪ್ತಾಗ್ನೌ ಬಾದರಿಕಪ್ರಮಾಣಮೋದನಂ ಆದಾಯ ದೇವತೀರ್ಥೇನ ಜುಹುಯಾತ್ |

೧೦)  ಆಹುತಯಃ
      ಓಂ ಓಂ ನಮೋ ನಾರಾಯಣಾಯ ಸ್ವಾಹಾ, ಓಂ ನಮೋ ನಾರಾಯಣಾಯ ಇದಂ ನ ಮಮ - ೧೨ ಆಹುತಿ
      ಓಂ ಕ್ಲೀಂ ಕೃಷ್ಣಾಯ ಸ್ವಾಹಾ, ಓಂ ಕ್ಲೀಂ ಕೃಷ್ಣಾಯ ಇದಂ ನ ಮಮ - ೦೬ ಆಹುತಿ
  ಓಂ ಬ್ರಹ್ಮಣೇ ಸ್ವಾಹಾ ಓಂ ಬ್ರಹ್ಮಣೆ ಇದಂ ನ ಮಮ -೧
      ಓಂ ಪ್ರಜಾಪತಯೇ ಸ್ವಾಹಾ, ಓಂ ಪ್ರಜಾಪತಯೇ ಇದಂ ನ ಮಮ -೧
      ಓಂ ಗೃಹ್ಯಾಭ್ಯಃ ಸ್ವಾಹಾ, ಓಂ ಗೃಹ್ಯಾಭ್ಯೋ ಇದಂ ನ ಮಮ -೧
      ಓಂ ಕಶ್ಯಪಾಯ ಸ್ವಾಹಾ, ಓಂ ಕಶ್ಯಪಾಯ ಇದಂ ನ ಮಮ -೧
      ಓಂ ಅನುಮತಯೇ ಸ್ವಾಹಾ, ಓಂ ಅನುಮತಯೇ ಇದಂ ನ ಮಮ -೧
      ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ ಓಂ ವಿಶ್ವೇಭ್ಯೋ ಇದಂ ನ ಮಮ -೧
      ಓಂ ಅಗ್ನಯೇ ಸ್ವಿಷ್ಟಕೃತೇ ಸ್ವಾಹಾ, ಓಂ ಅಗ್ನಯೇ ಸ್ವಿಷ್ಟಕೃತೇ ಇದಂ ನ ಮಮ -೧

೧೧)  ವ್ಯಾಹೃತಿ ಹೋಮಃ- (ಆಜ್ಯಹುತಿ)
      ಓಂ ಭೂಃ ಸ್ವಾಹಾ, -೧
      ಓಂ ಭುವಃ ಸ್ವಾಹಾ, -೧
      ಓಂ ಸ್ವಃ ಸ್ವಾಹಾಃ,  -೧
      (ಷೋಡಷೋಪಚಾರಪೂಜಾಃ ಸಮರ್ಪ್ಯ)

೧೨)  ಹುತಭಸ್ಮಧಾರಣಂ -
ಮಾನಸ್ತೋಕೇತ್ಯಸ್ಯ ಮಂತ್ರಸ್ಯ ಕುತ್ಸಃ ಋಷಿಃ ರುದ್ರೋ ದೇವತಾ ಜಗತಿ ಛಂದಃ ವಿಭೂತಿಗ್ರಹಣೇ ವಿನಿಯೋಗಃ 
      ಮಾನಸ್ತೋಕೇ ತನಯೇ ಮಾನ ಆಯೌ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ | ಮಾನೋ ವೀರಾನ್ರುದ್ರಭಾಮಿನೋ ವಧೀರ್ಹವಿಷ್ಮಂತಃ ಸದಮಿತ್ವಾ ಹವಾಮಹೇ ||
      ಓಂ ಕಶ್ಯಪಶ್ಯ ತ್ರ್ಯಾಯುಷಂ (ಇತಿ ಲಲಾಟೇ), ಓಂ ಜಮದಗ್ನೇಸ್ತ್ರ್ಯಾಯುಷಂ ( ಇತಿ ಕಂಠೇ),
      ಓಂ ಯದ್ದೇವಾನಾಂ ತ್ರ್ಯಾಯುಷಂ (ಇತಿ ಬಾಹ್ವೋಃ), ಓಂ ತನ್ಮೇ ಅಸ್ತು ತ್ರ್ಯಾಯುಷಂ (ಇತಿ ಹೃದಿ),
      ಓಂ ಶತಾಯುಷಂ ಬಲಾಯುಷಂ (ಇತಿ ಶಿರಸಿ), ಓಂ ಸ್ವಸ್ತಿ ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ | ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನ || ಇತಿ ನಮಸ್ಕಾರಂ ಕೃತ್ವಾ |

೧೩)  ಗೋತ್ರಾಭಿವಾದನಂ -
 ..... ತ್ರಿ/ಪಂಚ/ಸಪ್ತ ಋಷಯಾನ್ವಿತ ....ಗೋತ್ರೋದ್ಭವ ಕಾತ್ಯಾಯನಸೂತ್ರೀಯ
      ಶುಕ್ಲಯರ್ವೇದಾಂತರ್ಗತ ಕಣ್ವಶಾಖಾಧ್ಯಾಯೀ ......ಶರ್ಮಾ ಅಹಂ ಭೋ ಅಗ್ನೇ ಅಭಿವಾದಯಾಮಿ,

೧೪)  ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ವೈಶ್ವದೇವ ಕ್ರಿಯಾದಿಷು |
      ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ||
      ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ |
      ಯತ್ಕಿಂಚಿತ್ ಕ್ರಿಯತೇ ಕರ್ಮ ತತ್ಕರ್ಮ ಸಫಲಂ ಕುರು ||

೧೫)  ಅನೇನ ಪ್ರಾತ/ಸಾಯಂ ಕಾಲೇ ಆಚರಿತ ವೈಶ್ವದೇವಾಖ್ಯೇನ ಕರ್ಮಣಾ ಅಗ್ನ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಹರಿಣೀಪತಿ ಪರಶುರಾಮಃ ಪ್ರೀಯತಾಂ |
      ಶ್ರೀಕೃಷ್ಣಾರ್ಪಣಮಸ್ತು.

೧೬)  ಅಚ್ಯುತ, ಅನಂತ, ಗೋವಿಂದ ಅಚ್ಯುತಾನಂತಗೋವಿಂದೇಭ್ಯೋ ನಮೋ ನಮಃ.           
   

 ಸಂಗ್ರಹಕಾರರು   
     ಶ್ರೀ ಗುರುರಾಜಾಚಾರ್ಯ ಕೃ. ಪುಣ್ಯವಂತ. ಹುಬ್ಬಳ್ಳ್.
     ಗೃಂಥ ಋಣ - ಶ್ರೀ ಕಾಣ್ವಾಚಾರ ದರ್ಶನ.